Thursday, July 27, 2017

ವೀರಶೈವ ಲಿಂಗಾಯತ ಸತ್ಯ ಇಲ್ಲಿದೆ

ಬಸವಪೂರ್ವದಲ್ಲಿ ವೀರಶೈವ ಧರ್ಮ ಇಲ್ಲವೆನ್ನುವುದು ಸುಳ್ಳಿಿನ ಕಂತೆ. ಕಳೆದ ಕೆಲ ದಿನಗಳಿಂದ ನಡೆಯುತ್ತಿಿರುವ ಬಿಸಿಬಿಸಿ ಚರ್ಚೆಗೆ ಮಾಧ್ಯಮಗಳು ವೇದಿಕೆ ಕಲ್ಪಿಿಸಿವೆ ವಿನಃ. ಮೂಲ ಹುಡುಕುವ ಯಾವ ಪ್ರಯತ್ನವನ್ನು ಮಾಡಿಲ್ಲ ಎನ್ನುವುದು ಖೇದಕರ. 

ಕೃತಯುಗದಿಂದ ಬೆಳದು ಬಂದಿರುವ ವೀರಶೈವ ಧರ್ಮಕ್ಕೆೆ ಅದಕ್ಕೂ ಪೂರ್ವದಲ್ಲಿಯೇ ಇತಿಹಾಸವಿತ್ತು ಎನ್ನುವುದು ಸಾಕಷ್ಟು ಜನರಿಗೆ ತಿಳಿಯದ ವಿಷಯವಾಗಿದೆ. ಈ ಕುರಿತಂತೆ ಸಂಶೋಧಕ ಡಾ. ಚಿದಾನಂದಮೂರ್ತಿಗಳು ಸಾಕಷ್ಟು ಬಾರಿ ಅದನ್ನು ಸಾಕ್ಷಿಿ ಸಮೇತ ವಿವರಿಸಿದ್ದರು ಸಹ ಯಾವೊಬ್ಬ ಆ ಕುರಿತಂತೆ ಚರ್ಚೆಗೆ ತಯಾರಿಲ್ಲದಿರುವುದು ಸಾಕಷ್ಟು ಸಂಶಯಗಳನ್ನು ಹುಟ್ಟುಹಾಕಿದೆ. ಕಾರಣ ವಿವಿಧ ಮಾಧ್ಯಮಗಳ ಮೂಲಕ ಹೇಳಿಕೆ ನೀಡುತ್ತಿಿರುವ ಸ್ವಯಂ ಘೋಷಿತ ಜಗದ್ಗುರು ಮಾತೆ ಮಹಾದೇವಿ ಅವರ ಅನುಯಾಯಿಗಳಿಗೆ ಕಾಮಾಲೆ ರೋಗ ಬಂದಂತೆ ವರ್ತಿಸುತ್ತಿಿರುವುದು ಅವರು ಅಧ್ಯಯನದ ಫಲವಾಗಿದೆ. 

ಈ ಹಿಂದೆ ಮಾತೆ ಮಾತೆ ಮಹಾದೇವಿ ಅವರು, ಬಸವಣ್ಣನವರೇ ಸುಳ್ಳು ಎನ್ನುವ ಮೂಲಕ ಬಸವ ಅನುಯಾಯಿಗಳನ್ನು ದಿಕ್ಕು ತಪ್ಪಿಿಸಿದ್ದನ್ನು ಯಾರು ಮರೆಯುವಂತಿಲ್ಲ. ತಮಗೆ ಆಧ್ಯಾಾತ್ಮಿಿಕ ಗುರುಗಳಾಗಿದ್ದ ಲಿಂಗದೇವರೆ ಎಲ್ಲ ವಚನಗಳ ಕರ್ತೃ ಎನ್ನುವ ಮೂಲಕ ಬಸವಣ್ಣನ ವಚನಗಳನ್ನು ತಿದ್ದಿದ್ದರು ಅಷ್ಟೇ ಅಲ್ಲದೇ ಅಕ್ಕನ ವಚನಗಳ ನಾಮಾಂಕಿತ ತಿದ್ದಿ ಸಾಕಷ್ಟು ಆಕ್ರೋೋಶಕ್ಕೆೆ ಗುರಿಯಾಗಿದ್ದರು. ಇಂತಹ ಸಣ್ಣ ಮನಸ್ಸಿಿನ ಖಾವಿಧಾರಿಗಳಿಂದ ಬಸವ ಅನುಯಾಯಿಗಳು ಜಾಗೃತ ಕಾಲ ಬಂದಂತಿದೆ.

ಈಗಾಗಲೇ ಸಾಕಷ್ಟು ಸಂಶೋಧನೆ ಹಾಗೂ ಪುರಾತತ್ವ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರವೇ ವೀರಶೈವ ಧರ್ಮ ಬಸವಪೂರ್ವ ಯುಗದ್ದು ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಅಲ್ಲದೇ ಬಸವಣ್ಣನವರ ಅನುಯಾಯಿಗಳಾದ ವಿರಕ್ತ ಮಠಾಧೀಶರು ಸಹ ಇದನ್ನು ಒಪ್ಪಿಿಕೊಂಡಾಗಿದೆ. ಅದರಲ್ಲೂ ವಿರಕ್ತ ಪರಂಪರೆಯ ಮೇರು ಶಿಖರದಂತಿದ್ದ ಯಡಿಯೂರು ಸಿದ್ಧಲಿಂಗೇಶ್ವರರು ಸಹ ವೀರಶೈವ ಧರ್ಮದ ಕುರಿತು ಸಾಕಷ್ಟು ಉಲ್ಲೇಖ ಮಾಡಿರುವುದು ಇತಿಹಾಸದಿಂದ ಕಾಣ ಸಿಗುತ್ತದೆ. 

ದಾಖಲೆಯಾಗಿ ಶಾಸನಗಳು

ಬಯರಿತ್ತಿಿ ಶಾಸನ ಕ್ರಿಿಶ 1000 ಕಕ್ಕೇರಿ, 1127, ಉದ್ರಾಾಮಿ ಕ್ರಿಿಶ 1157 ಕೊಳ್ಳೂರು ಕ್ರಿಿಶ1180, ಅಮ್ಮಿಿನಭಾವಿ ಮಠದಲ್ಲಿರುವ ಪತ್ರ ಕ್ರಿಿಶ 1130, ಶಿರನಾಳ ಕ್ರಿಿಶ 1187, ಅವ್ವೇರಹಳ್ಳಿಿ ಕ್ರಿಿಶ 1193 ಚೌಡದಾನಪುರ ಕ್ರಿಿಶ 1193 ಮುಂತಾದ ಶಾಸನಗಳಲ್ಲಿ ರಂಭಾಪುರಿ ಪೀಠದ ಕುರಿತು ಉಲ್ಲೇಖವಿದೆ. ಬಾಗಳಿ ಕ್ರಿಿಶ 1078 ಅವ್ವೇರಹಳ್ಳಿಿ  ಕ್ರಿಿಶ1093ಮರಡಿಪುರ ಕ್ರಿಿಶ 1280 ಶಾಸನಗಳು ಉಜ್ಜಯಿನಿ ಪೀಠದ ಕುರಿತು ಹೇಳುತ್ತವೆ. ಇನ್ನೂ ಸುಪ್ರಸಿದ್ದ ರಾಜನಾಗಿದ್ದ ಜನಮೇಯನ ತಾಮ್ರ ಶಾಸನ ಕ್ರಿಿಪೂ 1500 ಮರಡಿಪುರ ಕ್ರಿಿಶ1280 ಶಾಸನಗಳು ಕೇದಾರ ಪೀಠದ ಚರಿತ್ರೆೆಗೆ ಹಿಡಿದ ಕೈ ಗನ್ನಡಿಯಾಗಿದೆ. ಪಾಣೆಂ ಕ್ರಿಿಶ ಸುಮಾರು 8020 ಗುಂಡಾಲ, ನಡಾಲ. ಹನುಮಕೊಂಡ, ಪಾಲಂಪೇಟ ಬಿಜವಾಡ ಕ್ರಿಿಶ 1100 ಘಂಟಾಮರ ಮುಂತಾದ ಶಾಸನಗಳು ಶ್ರೀಶೈಲ ಪೀಠದ ಕುರಿತು ಉಲ್ಲೇಖ ಮಾಡಿವೆ, 

ಇನ್ನೂ ಕಾಶಿ ಪೀಠದ ಕುರಿತು ಹೇಳಬೇಕೆಂದರೆ , ಜಯನಂದ ದೇವ ಶಾಸನ ಕ್ರಿಿಶ 574, ಜಂಗಮಪುರ ಕ್ರಿಿಶ 631, ನೇಪಾಳ ಜಂಗಮಠ ಕ್ರಿಿಶ 635 ಮುಂತಾದ ಶಾಸನಗಳು ಶ್ರೀಪೀಠದ ಕುರಿತು ಸ್ಪಷ್ಟ ಮಾಹಿತಿ ಹೊಂದಿದೆ.ಇನ್ನೂ ಹಿಂದೂ ವಿರೋಧಿಗಳಾಗಿದ್ದ ಮೊಗಲ್ ದೊರೆಗಳು ಪೀಠದ ಅಂದಿನ ಜಗದ್ಗುರುಗಳ ತಪಶಕ್ತಿಿಗೆ ತಲೆಬಾಗಿ ಕಾಶಿ ಮಠಕ್ಕೆೆ ನಡೆದುಕೊಂಡಿರುವುದು ಹಾಗೂ ಆ ಕುರಿತು ಇರುವ ದಾಖಲೆಗಳು ಇಂದಿಗೂ ಜಂಗಮವಾಡಿ ಮಠದಲ್ಲಿ ಕಾಣ ಸಿಗುತ್ತವೆ.

ಕೃತ, ತ್ರೇತಾ, ದ್ವಾಾಪರ ಹಾಗೂ ಕಲಿಯುಗದಲ್ಲಿ ಸಂದರ್ಭಕ್ಕೆೆ ಅನುಸಾರವಾಗಿ ಶಿವನ ಅಪ್ಪಣೆಯಿಂದ ಉದಯಿಸಿ ವೀರಶೈವ ಧರ್ಮ ಸ್ಥಾಾಪಿಸಿದ ರೇಣುಕಾದಿ ಪಂಚಾಚಾರ್ಯರು, ವೀರಶೈವ ಧರ್ಮದ ಜತೆಗೆ ಹಿಂದೂ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಿದ್ದರು ಎನ್ನುವುದನ್ನು ನಾವು ಅರಿಯಬೇಕಿದೆ. ವೀರಶೈವ ಅಥವಾ ಲಿಂಗಾಯತ ಧರ್ಮ ಹಿಂದು ಸಂಸ್ಕೃತಿಯ ಭಾಗವೇ ಅಲ್ಲ ಎಂದು ಹೇಳಿಕೆ ನೀಡುತ್ತಿಿರುವ ಅಲ್ಪ ಜ್ಞಾಾನಿಗಳಿಗೆ ಒಂದು ಮಾತನ್ನು ಹೇಳಲೆ ಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತದಲ್ಲಿ ಸುಮಾರು 130 ಕೋಟಿ ಜನಸಂಖ್ಯೆೆಯಲ್ಲಿ ಕೇವಲ  6-7 ಬಗೆಯ ಮಾನವನ ಜೀನ್‌ಸ್‌‌ಗಳು ಒಂದಕ್ಕಿಿಂತ ವಿಭಿನ್ನವಾಗಿದ್ದು ಉಳಿದ್ದೇಲ್ಲವು ಸಹ ಹೊಲಿಕೆಯಾಗುತ್ತವೆ. ಇದು ವೈಜ್ಞಾಾನಿಕವಾಗಿಯೂ ದೃಢಪಟ್ಟಿಿದೆ. ಅಂತಹುದರಲ್ಲಿ ವೀರಶೈವ ಲಿಂಗಾಯತರು ಹಿಂದೂ ಸಂಸ್ಕೃತಿಯ ಭಾಗವೇ ಅಲ್ಲ ಎನ್ನುವುದು ಮೂರ್ಖತನದ ಪರಮಾವಧಿಯಾದಿತು. ಈಗಾಗಲೇ ವಿವಿಧ ಕಾರಣಗಳಿಂದ ದಾಳಿಗೊಳಗಾಗಿರುವ ಹಿಂದು ಧರ್ಮವನ್ನು ರಕ್ಷಿಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ವಿನಾಕಾರಣ ಜನರನ್ನು ದಿಕ್ಕು ತಪ್ಪಿಿಸುತ್ತಿಿರುವ ಕೆಲವರು ಹಿಂದು ಧರ್ಮವೇ ಬೇರೆ ಲಿಂಗಾಯತರೇ ಬೇರೆ ಎನ್ನುವ ಮೂಲಕ ತಮ್ಮನ್ನು ತಾವೇ ಹಳಿದುಕೊಳ್ಳುತ್ತಿಿದ್ದಾಾರೆ.

ಚನ್ನಬಸವಣ್ಣ, ಘಟ್ಟಿಿವಾಳಯ್ಯ, ಮೆರಿಮಿಂಢಿದೇವಯ್ಯ, ಡಿ. ಬಾಲಬೊಮ್ಮಣ್ಣ, ಅಕ್ಕನಾಗಾಯಿ, ಹಾವಿನಹಾಳ ಕಲ್ಲಯ್ಯ ಅಕ್ಕ, ಸಿದ್ಧಾಾರಾಮಯ್ಯ, ತೋಂಟದ ಯತಿಗಳು ಮತ್ತು ಬಸವಣ್ಣನವರ ಹಿರಿಯ ಸಮಕಾಲಿನರಾದ ಆದಯ್ಯ, ಸಕಲೇಶ ಮಾದಯ್ಯ, ಮುಂತಾದ ಶರಣರು ತಮ್ಮ ಅನೇಕ ವಚನಗಳಲ್ಲಿ ಪಂಚಾಚಾರ್ಯರರನ್ನು ಭಕಿ ಭಾವದಿಂದ ಅನನ್ಯವಾಗಿ ನೆನದಿದ್ದಾಾರೆ.

ತಮ್ಮ ಧರ್ಮದ ಬಗೆಗೆ ಪ್ರತಿಯೊಬ್ಬರಿಗೂ ಗೌರವ ಆದರಾಭಿಮಾನಗಳು ಇದ್ದೇ  ಇರುತ್ತವೆ. ಇಲ್ಲಿ ಮೇಲು ಕೀಳೆಂಬುದೇ ಇಲ್ಲ. ತಾಯಿಗೆ ಚಂದನೆಯ ಹೆಸರಿಲ್ಲವೆಂದು ಬೇರೆಯವರನ್ನು ತಾಯಿ ಎನ್ನಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿಯಾಗಿ ಈ ಹೆಸರು ಸರಿಯಿಲ್ಲವೆಂದು ಧರ್ಮಕ್ಕೆೆ ಮೊತ್ತಂದೊ ಹೆಸರಿಟ್ಟರೆ ಹೇಗಾದಿತೂ. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಪರಂಪರೆ ಹಾಗೂ ಧರ್ಮ ಉಳಿಯಬೇಕಾದರೆ ಎಲ್ಲರೂ ಒಂದಾಗಿ ಸ್ವಾಾರ್ಥಿಗಳನ್ನು ಹಿಮ್ಮೆೆಟ್ಟಿಿಸಬೇಕಿದೆ. 

ವಚನಗಳಲ್ಲಿ ಹಾಗೂ ಅದಕ್ಕಿಿಂತಲೂ ಮುಂಚಿನ ವೇದಾಗಮಗಳಲ್ಲಿ ವೀರಶೈವ ಪದ ಸಾಕಷ್ಟು ಬಾರಿ ಬಳಕೆಯಾಗಿದೆ. ಅದರಲ್ಲೂ ಬಸವಣ್ಣನವರಿಂದ ಹಿಡಿದು ಹೇಮಗಲ್ಲ ಹಂಪನವರೆಗಿನ 29 ಶರಣರು ಒಟ್ಟು 161 ವಚನಗಳಲ್ಲಿ 170 ಸಲ ವೀರಶೈವ ಪದವನ್ನು ಧರ್ಮವಾಚಕವಾಗಿ ಬಳಸಿದ್ದಾಾರೆ. ಇದನ್ನೇ ವಿವರಿಸುತ್ತಾಾ ಹೋದರೆ ಒಂದು ಪುಟವಲ್ಲ ನೂರು ಪುಟಗಳಾದರೂ ವೀರಶೈವ ಪರಂಪರೆ ಇತಿಹಾಸದ ಕುರಿತು ಬರೆಯಬಹುದಾಗಿದೆ. 

ವೀರಶೈವ ಲಿಂಗಾಯತ ಒಂದೇ  ಅಲ್ಲಿ ಭೇದವಿಲ್ಲ. ಈಚೆಗೆ ಭೇದ ಕಲ್ಪಿಿಸುತ್ತಿಿರುವುದು ಸರಿಯಲ್ಲ ಎನ್ನುವುದು ಬಹುತೇಕರವಾದವಾಗಿದೆ. ಈ ಕುರಿತಂತೆ ಸಿದ್ಧಗಂಗೆಯ ಮುಕುಟವಾಗಿರುವ ಶತಾಯುಷಿಗಳು ಹೇಳಿಕೆ ನೀಡುವುದು ಅನಿವಾರ್ಯವಾಗಿದೆ ಎನ್ನುವುದು ನನ್ನ ಭಾವನೆ. ಕಾರಣ ಬಸವಣ್ಣನವರ ವಚನಗಳ ಸಾರವನ್ನು ದಿನನಿತ್ಯದಲ್ಲಿ ಅಳವಡಿಸಿಕೊಂಡಿರುವ ಶ್ರೀಗಳು ಈ ಕುರಿತು ಹೇಳಿಕೆ ನೀಡಿದ್ದಲ್ಲಿ ಪಂಚಪೀಠಾಧೀಶ್ವರರು ಹೇಳುತ್ತಿಿರುವ ಮಾತುಗಳಿಗೆ ಇನ್ನೂ ಹೆಚ್ಚಿಿನ ಮಹತ್ವ ಬರುತ್ತದೆ. ಈಗಾಗಲೇ ಸಮಾಜ ಒಡೆದು ಹೋಗಿದ್ದು ಇನ್ನೂ ಹೆಚ್ಚಿಿನ ಪ್ರಮಾಣದಲ್ಲಿ ವಿಭಜನೆಯಾದರೆ ಮುಂದೊಂದು ದಿನ ಈ ಅಲ್ಪ ಮತಿಗಳು ಹಾಗೂ ಸ್ವಯಂ ಘೋಷಿತ ಜಗದ್ಗುರು ಎಂದು ಹೇಳಿಕೊಳ್ಳುವವರು ಬಸವಣ್ಣ ಹುಟ್ಟೆೆಯಿಲ್ಲ ಅಂದರೆ ಏನು ಮಾಡುವುದು.?

- ಪ್ರಶಾಂತ ರಾಜ ರಾಜ ಗುರು









Thursday, April 13, 2017

ಬಿಎಸ್‌ವೈಗೆ ಬ್ರೇಕ್ ಹಾಕಲು ಯತ್ನ

ಬ್ಲರ್ಬ್
ಚುನಾವಣೆ ಸೋಲು ಗೆಲುವುಗಳ ಕುರಿತು ಮೊದಲಿಂದಲೂ ರಾಜ್ಯಾಾಧ್ಯಕ್ಷರುಗಳು ವರದಿ ನೀಡುವುದು ಸಾಮಾನ್ಯ. ಆದರೆ ಈ ಬಾರಿ ಬಿಜೆಪಿಯಲ್ಲಿ ರಾಜ್ಯಾಾಧ್ಯಕ್ಷರ ವರದಿ ಹೊರತಾಗಿ ಮೊತ್ತೊೊಂದು ಗೌಪ್ಯ ವರದಿ ಸಿದ್ಧಮಾಡಲಾಗುತ್ತಿಿದ್ದು ಯಾರ ಮೂಲಕ ಅಮಿತ್ ಷಾ ಕೈ ತಲುಪಲಿದೆ ಎಂಬುದು ಕುತುಹಲ ಮೂಡಿಸಿದೆ.

ವರದಿ ನೆಪದಲ್ಲಿ ಪರೋಕ್ಷ ದೂರಿಗೆ ನಿರ್ಧಾರ
ಪ್ರಶಾಂತ ರಾಜಗುರು
ಪ್ರತಿಷ್ಠಿಿತ ಕಣವಾಗಿದ್ದ  ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆೆಸ್ ಜಯ ಸಾಧಿಸುತ್ತಿಿದ್ದಂತೆ ಕೇಸರಿ ಬ್ರಿಿಗೇಡ್‌ನಲ್ಲಿ ಸಂಚಲನ ಮೂಡಿದೆ. ಇದೇನ್ರಿಿ ಈ ಥರಾ ಹೇಳ್ತಾಾಯಿದಿರಾ ಅಂತ ಮೂಗು ಮೂರಿಬೇಡಿ. ಏನೇನ್ ಆಗ್ತಾಾಯಿದೆ ಅನ್ನುದನ್ನ ಮುಂದೆ ಹೇಳ್ತಿಿನಿ ಕೇಳಿ.
ಶ್ರೀನಿವಾಸ್ ಪ್ರಸಾದ ಅವರನ್ನು ಬಿಜೆಪಿಗೆ ಕರೆ ತರುವ ಮೂಲಕ ಮೈಸೂರು ಭಾಗದಲ್ಲಿ  ಜೆಡಿಎಸ್ ಹಾಗೂ ಕಾಂಗ್ರೆೆಸ್‌ಗೆ ಪರ್ಯಾಾಯ ಶಕ್ತಿಿಯಾಗಿ ಬೆಳೆಯಬೇಕು ಎಂದು ಕೊಂಡಿದ್ದ ಬಿಎಸ್‌ವೈಗೆ ಸೋಲು ಸಾಕಷ್ಟು ಘಾಸಿ ಮಾಡಿದೆ. ಗುಂಡ್ಲುಪೇಟೆಯಲ್ಲಿ ಅನುಕಂಪ ಪ್ರಭಾವಿ ಬೀರಿದ್ದರೆ ಇಲ್ಲಿ ಡಿಕೆಶಿ ರಣತಂತ್ರ ಕೈ ಹಿಡಿದಿದೆ. ಇದರಿಂದಾಗಿ ಬಿಜೆಪಿಯಲ್ಲಿನ ಬಿಎಸ್‌ವೈ ವಿರೋಧಿ ಬಣ ತುರುಸಿನ ಕಾರ್ಯಚಟುವಟಿಕೆ ನಡೆಸುತ್ತಿಿದೆ. ಸೋಲು ಖಚಿತವಾಗುತ್ತಿಿದ್ದೆೆ ಬಿಎಸ್‌ವೈ ಹಣಿಯಲು ಯತ್ನಿಿಸುತ್ತಿಿರುವ ಗುಂಪು ಸೋಲಿಗೆ ಏನು ಕಾರಣ ಎಂಬುದನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಮೂಲಕ ವರಿಷ್ಠರಿಗೆ ವರದಿ ನೀಡಲು ಸಜ್ಜಾಾಗಿದೆ.
ಈಗಾಗಲೇ ಸಂಗೋಳ್ಳಿಿ ರಾಯಣ್ಣ ಬ್ರಿಿಗೇಡ್ ಕಟ್ಟುವ ವಿಚಾರದಲ್ಲಿ ಸಾಕಷ್ಟು ಗೊಂದಲ ಮೂಡಿಸಿದ್ದ ಈಶ್ವರಪ್ಪ ತಮ್ಮ ಹೇಳಿಕೆಯಲ್ಲಿ ಬಿಜೆಪಿ ಸೋಲಿಗೆ ಒಳಜಗಳವೇ ಕಾರಣ ಎನ್ನುವ ಅರ್ಥದಲ್ಲಿ ಮಾತನಾಡಿರುವುದು ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವಿನ ವೈಮನಸ್ಸು ಆರಿಲ್ಲ ಎಂಬುದನ್ನು ಸಷ್ಟವಾಗಿಸಿದೆ. ಜತೆಗೆ ಮೊದಲಿನಿಂದಲೂ ಬಿಜೆಪಿಯಲ್ಲಿ ತಮ್ಮದೇಯಾದ ಹಿಂಬಾಲಕರನ್ನು ಹೊಂದಿರುವ ಕೇಂದ್ರ ಸಚಿವರು ಸುಮ್ಮನೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ವರದಿ ತಯಾರಿಗೆ ಕಾರಣ
ಬಿಎಸ್‌ವೈ ಅಧ್ಯಕ್ಷರಾದ ದಿನದಿಂದಲೂ ಕೆಜೆಪಿಯಲ್ಲಿ ತಮ್ಮ ಜತೆಗಿದ್ದ ನಾಯಕರಿಗೆ ಜಿಲ್ಲಾಾಧ್ಯಕ್ಷ ಹಾಗೂ ವಿವಿಧ ಮೋರ್ಚಾಗಳ ನೇಮಕಾತಿಯಲ್ಲಿ ಮಾನ್ಯತೇ ನೀಡಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಈ ಮೊದಲೇ ಸಿಟ್ಟಾಾಗಿದ್ದ ನಾಯಕರು ಬಿಎಸ್‌ವೈ ದರ್ಬಾರಿಗೆ ಬ್ರೇಕ್ ಹಾಕಲು ಹವಣಿಸುತ್ತಿಿದ್ದರು. ಈ ಸೋಲನ್ನೆೆ ದಾಳವಾಗಿಟ್ಟುಕೊಂಡು ಮುಂದಿನ ಚುನಾವಣೆ ವೇಳೆಗೆ ಬಿಎಸ್‌ವೈ ಹಾಗೂ ಹಿಂಬಾಲಕರಿಗೆ ಚುರುಕು ಮುಟ್ಟಿಿಸಲು ಸಜ್ಜಾಾಗಿದ್ದಾಾರೆ. ಅಲ್ಲದೇ ಮಿಷನ್ 150 ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಓಡಾಡುತ್ತಿಿರುವ ಯಡಿಯೂರಪ್ಪ ಈಗಾಗಲೇ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆೆ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಲಕ್ಷಣಗಳು ಕಂಡು ಬಂದ ಹಿನ್ನೆೆಲೆಯಲ್ಲಿ ವಿರೋಧಿ ಬಣ ವರದಿ ತಯಾರಿಸಿದೆ.
ವರಿಷ್ಠರ ಮಾತನ್ನು ಅವರಿಗೆ ತಿರುಗಿಸುವ ಯತ್ನ
ಕಾಂಗ್ರೆೆಸ್ ಮುಕ್ತ ಭಾರತ ಬಿಜೆಪಿ ಒಂದಂಶದ ಕಾರ್ಯಕ್ರಮವಾಗಿರುವುದನ್ನು ಮನಗಂಡಿರುವ ವಿರೋಧಿ ನಾಯಕರು ರಾಜ್ಯ ಸರಕಾರ ಸಾಕಷ್ಟು ಹಗರಣ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿಿದೆ. ಆದರೂ ಸಹ ವಿರೋಧ ಪಕ್ಷವಾಗಿರುವ ಬಿಜೆಪಿಗೆ ಸೋಲಾಗಿದೆ. ಇದರಿಂದ ಬಿಜೆಪಿ ಪಾಠ ಕಲಿಯಬೇಕಿದ್ದು, ಜನರನ್ನು ಸೆಳೆಯುವಲ್ಲಿ ಬಿಎಸ್‌ವೈ ವಿಫಲರಾಗಿದ್ದಾಾರೆ. ಇದರಿಂದಾಗಿ ಕಾಂಗ್ರೆೆಸ್ ಮುಕ್ತ ಭಾರತದ ಕನಸು ಕಾಣುತ್ತಿಿರುವ ನಿಮಗೆ ( ವರಿಷ್ಠರಿಗೆ) ಕರ್ನಾಟಕ ಅಡ್ಡಗಾಲು ಆಗಬಾರದು ಆ ನಿಟ್ಟಿಿನಲ್ಲಿ ಕೂಡಲೇ ಕ್ರಮಕ್ಕೆೆ ಮುಂದಾಗಬೇಕು ಎನ್ನುವ ಮಾತನ್ನು ವರಿಷ್ಠರಿಗೆ ಹೇಳುವ ಮೂಲಕ ವರಿಷ್ಠರಲ್ಲಿ ಪರೋಕ್ಷವಾಗಿ ದೂರು ನೀಡಲು ನಿರ್ಧರಿಸಿದೆ.
ಒಟ್ಟಿಿನಲ್ಲಿ ಮುಂದಿನ ಚುನಾವಣೆಯಲ್ಲಿ ಜಯ ಸಾಧಿಸಿ ಮತ್ತೆೆ ಅಧಿಕಾರದ ಗದ್ದುಗೆ ಏರುವ ಮೂಲಕ ಎರಡನೇ ಬಾರಿ ಸಿಎಂ ಆಗುವ ಹಾಗೂ ಆ ಮೂಲಕ ದಕ್ಷಿಣ ಭಾರತದಲ್ಲಿ ಸ್ವತಂತ್ರ್ಯವಾಗಿ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಕನಸು ಕಾಣುತ್ತಿಿರುವ ಬಿಎಸ್‌ವೈಗೆ ಅವರ ಪಕ್ಷದ ಮುಖಂಡರೆ ಈ ರೀತಿ ವಿರೋಧಿ ನೀತಿ ಅನುಸರಿಸುತ್ತಿಿರುವುದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.


Wednesday, March 15, 2017

ಧಾರವಾಡದಲ್ಲಿ ಮತ್ತೆೆ ಆಪರೇಷನ್ ಕಮಲ -ವಿಶ್ಲೇಷಣೆ : ಪ್ರಶಾಂತ ರಾಜ ಗುರು

ಧಾರವಾಡದಲ್ಲಿ ಮತ್ತೆೆ ಆಪರೇಷನ್ ಕಮಲ ಶುರವಾಗುವ ಲಕ್ಷಣಗಳು ಗೋಚರಿಸುತ್ತಿಿವೆ. 2008 ಹಾಗೂ 2009ರ ಆದಿಯಲ್ಲಿ ಬಿಜೆಪಿ ಸರಕಾರವಿದ್ದ ಸಂದರ್ಭದಲ್ಲಿ ಶುರುವಾಗಿದ್ದ ಆಪರೇಶನ್ ಕಮಲ ನಂತರದ ದಿನಗಳಲ್ಲಿ ಆಪರೇಶನ್ ಕೈವರೆಗೂ ಬಂದು ನಿಂತಿತ್ತು. ಆದರೆ ಈಗ ಮತ್ತೆೆ ಜಿಲ್ಲೆೆಯಲ್ಲಿ ಬೇರೆ ಪಕ್ಷಗಳ ಪ್ರಭಾವಿ ನಾಯಕರು ಕಮಲದತ್ತ ಮುಖ ಮಾಡುತ್ತಿಿದ್ದಾಾರೆ. ಇಂದರಿಂದಾಗಿ ಆಯಾ ಪಕ್ಷಗಳಲ್ಲಿ ಸಂಚಲನ ಉಂಟಾಗಿದ್ದು ತಮ್ಮ ನಾಯಕರುಗಳನ್ನು ಹಿಡಿದಿಟ್ಟುಕೊಳ್ಳಲು ಶತಾಯಗಥಾಯ ಪ್ರಯತ್ನ ಆರಂಭವಾದೆ.
ಯಾಕಿ ಹೀಗೆ : ಈಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆೆಸ್ ಹಾಗೂ ಪ್ರಾಾದೇಶಿಕ ಪಕ್ಷಗಳು ಮಕಾಡೆ ಮಲಗಿದ ಹಿನ್ನೆೆಲೆಯಲ್ಲಿ ಕಾಂಗ್ರೆೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ ಎನ್ನಲಾಗಿದೆ. ಅದರಲ್ಲೂ ಕಾಂಗ್ರೆೆಸ್ ಆಡಳಿತವಿದ್ದರೂ ನಿಷ್ಠಾಾವಂತ ಕಾರ್ಯಕರ್ತರನ್ನು ಕಡೆಗಣಿಸಿರುವುದು ಹಾಗೂ ಬಣ ರಾಜಕೀಯವಿಟ್ಟುಕೊಂಡು ಅವರನ್ನು ಅಧಿಕಾರದಿಂದ ದೂರವಿಟ್ಟ ಹಿನ್ನೆೆಲೆಯಲ್ಲಿ ಬಹುತೇಕ ಯುವ ಕಾರ್ಯಕರ್ತರು ಬಿಜೆಪಿಯತ್ತ ಮುಖಮಾಡುತ್ತಿಿದ್ದಾಾರೆ. ಜತೆಗೆ ಜೆಡಿಎಸ್ ಕಾರ್ಯಕರ್ತರು ಸಹ ಈಗಾಗಲೇ ತಮ್ಮ ತಮ್ಮ  ಬ್ಲಾಾಕ್ ಮಟ್ಟದ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವುದು ಖಚಿತವಾಗಿದೆ.
ಕಾಂಗ್ರೆೆಸ್‌ಗೆ ಬೀಳಲಿದೆ ದೊಡ್ಡ ಪೆಟ್ಟು
ಆಡಳಿತಾರೂಢ ಕಾಂಗ್ರೆೆಸ್‌ಗೆ ಧಾರವಾಡ ಜಿಲ್ಲೆೆಯಲ್ಲಿ ದೊಡ್ಡ ಪೆಟ್ಟು  ಬೀಳಲದೆ ಎನ್ನುವ ಮಾತುಗಳು ಬಿಜೆಪಿ ಪಾಳಯದಿಂದ ಕೇಳಿ ಬರುತ್ತಿಿವೆ. ಆದರಲ್ಲೂ ಜಿಲ್ಲೆೆಯ ಪ್ರಭಾವಿ ಲಿಂಗಾಯತ ನಾಯಕರೊಬ್ಬರು 2017 ಡಿಸೆಂಬರ್ ವೇಳೆಗೆ ಕಾಂಗ್ರೆೆಸ್ ತೊರೆದು ಬಿಜೆಪಿ ಸೇರಲಿದ್ದಾಾರೆ. ಈ ಸಂಬಂಧ ಈಗಾಗಲೇ ಲಿಂಗಾಯತ ಮುಖಂಡರ ಮಧ್ಯಸ್ಥಿಿಕೆಯಲ್ಲಿ ರಾಜ್ಯಾಾಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದ್ದು ಅಧಿಕಾರವಧಿ ಮುಗಿಸಿ, ಇರುವ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿ ಡಿಸೆಂಬರ್ ವೇಳೆಗೆ ಪಕ್ಷಕ್ಕೆೆ ಸೇರ್ಪಡೆಯಾಗುವಿರಂತೆ ಎಂದು ಯಡಿಯೂರಪ್ಪ ಹೇಳಿದ್ದಾಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಇದಕ್ಕೆೆ ಕೆಲ ಮಾಜಿ ಶಾಸಕರು ಹಾಗೂ ಪ್ರಭಾವಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಕಳೆದೊಂದು ದಶಕದಿಂದ ಅವರೊಂದಿಗೆ ರಾಜಕೀಯ ಅಖಾಡದಲ್ಲಿ ವಿರೋಧಿಗಳಾಗಿದ್ದು ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಬಿಎಸ್‌ವೈಗೆ ಆರ್‌ಎಸ್‌ಎಸ್ ಮೂಲಕ ಹೇಳಿಸಿದ್ದಾಾರೆ ಎನ್ನಲಾಗಿದೆ. ಆದರೆ ಇದಕ್ಕೆೆ ಪ್ರತಿಯಾಗಿ ಬಿಎಸ್‌ವೈ ಬಿಜೆಪಿಯನ್ನು ಅಧಿಕಾರಕ್ಕೆೆ ತರುವ ಹೊಣೆ ನನ್ನದಾಗಿದ್ದು ಯಾರನ್ನೂ ಪಕ್ಷಕ್ಕೆೆ ಸೇರ್ಪಡೆ ಮಾಡಿಕೊಳ್ಳಬೇಕು ಅಥವಾ ಬಿಡಬೇಕು ಎಂಬುದನ್ನು ರಾಜ್ಯ ಮುಖಂಡರು ನಿರ್ಧರಿಸಲಿದ್ದಾಾರೆ. ಅದರ ಬಗ್ಗೆೆ ತಲೆಕೆಡಿಸಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾಾರೆ ಎಂಬ ಸುದ್ದಿಯಿದೆ.
ಮಹಾರಾಷ್ಟ್ರ -ಉತ್ತರ ಪ್ರದೇಶ ಮಾದರಿ
ಈಚೆಗೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆೆ ಹಾಗೂ ಉತ್ತರಾಖಂಡ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಮಲ ಪಾಳಯ ಅನುಸರಿಸಿದ ತಂತ್ರಗಾರಿಕೆಯನ್ನೇ ರಾಜ್ಯದಲ್ಲಿಯೂ ಅನುಸರಿಸಲು ಮುಂದಾಗಿರುವ ಬಿಜೆಪಿ ಅದಕ್ಕಾಾಗಿ ಈಗಿನಿಂದಲೇ ತಂತ್ರಗಾರಿಕೆ ಶುರುಮಾಡಿದೆ. ಅದರ ಭಾಗವಾಗಿಯೇ ಕಾಂಗ್ರೆೆಸ್ ಹಾಗೂ ಜೆಡಿಎಸ್‌ನಲ್ಲಿನ ಸಣ್ಣ ಸಣ್ಣ ಜಾತಿಯ ನಾಯಕರಿಗೆ ಮಣೆಹಾಕುವ ಜತೆಗೆ ಬೇರೆ ಪಕ್ಷಗಳಲ್ಲಿನ ಗೆಲ್ಲುವ ಕುದುರೆಗಳನ್ನು ಪಕ್ಷಕ್ಕೆೆ ಬರಮಾಡಿಕೊಳ್ಳಲು ನಾಯಕರಿಗೆ ಸೂಚಿಸಲಾಗಿದೆ ಎಂಬ ಮಾತು ಸಹ ಹರಿದಾಡುತ್ತಿಿದೆ. ಅದ ಭಾಗವಾಗಿಯೇ ಜಿಲ್ಲೆೆಯ ಕಾಂಗ್ರೆೆಸ್ ನಾಯಕರು ಬಿಜೆಪಿ ಸೇರಲಿದ್ದಾಾರೆ ಎನ್ನಲಾಗಿದೆ.
ಪಾರಾಗುವ ತಂತ್ರ
ಬಿಜೆಪಿ ಮುಖಂಡರೊಬ್ಬರ ಹತ್ಯೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಆರೋಪಿಗಳು ಶರಣಾಗಿದ್ದರೂ ಕೆಲ ಕಾಂಗ್ರೆೆಸ್ ನಾಯಕರ ಮೇಲೆ ಮೃತ ಬಿಜೆಪಿ ಮುಖಂಡರ ಮನೆಯವರು ಆರೋಪ ಮಾಡುತ್ತಿಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಕೊಲೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಾಕಷ್ಟು ಬಾರಿ ಸರಕಾರಕ್ಕೆೆ ಒತ್ತಾಾಯಿಸಿದರೂ ಸಹ ಕಾಂಗ್ರೆೆಸ್ ಸರಕಾರ ಅದನ್ನು ಸಿಬಿಐಗೆ ನೀಡಿಲ್ಲ ಇದರಿಂದಾಗಿ ಸಹಜವಾಗಿಯೇ ಕಾಂಗ್ರೆೆಸ್ ಸರಕಾರದ ಮೇಲೆ  ಬಿಜೆಪಿ ಆಕ್ರೋೋಶ ವ್ಯಕ್ತಪಡಿಸುತ್ತಿಿದೆ. ಆದರೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಸರಕಾರಕ್ಕೆೆ ಮತ್ತೆೆ ಬಹುಮತ ದೊರೆಯುವ ನಿರೀಕ್ಷೆಗಳು ಕ್ಷೀಣಿಸಿದ್ದು ಇದನ್ನು ಮನಗಂಡಿರುವ ಕಾಂಗ್ರೆೆಸ್ ಮುಖಂಡರು ಒಂದು ವೇಳೆ ಬಿಜೆಪಿ ಅಧಿಕಾರಕ್ಕೆೆ ಬಂದಲ್ಲಿ ಆ ಪ್ರಕರಣವನ್ನು ಸಿಬಿಐಗೆ ವಹಿಸುವ ಸಾಧ್ಯತೆಗಳು ದಟ್ಟವಾಗಿರುವ ಹಿನ್ನೆೆಲೆಯಲ್ಲಿ ಅದರಿಂದಲೂ ಸಹ ಪಾರಾಗಲೂ ಈ ಪಕ್ಷಾಂತರ ಸಹಕಾರಿಯಾಗಲಿದೆ ಅಲ್ಲದೇ ತಾವೇಷ್ಟೆೆ ಉತ್ತಮವಾಗಿ ಕಾರ್ಯ ನಿರ್ವಹಿಸಿದರೂ, ಸಹ ಆಡಳಿತ ವಿರೋಧಿ ಅಲೆ ಹೆಚ್ಚಿಿರುವ ಕಾರಣ ಮುಂದಿನ ಚುನಾವಣೆಯಲ್ಲಿ ಗೆಲ್ಲವುದು ಕಷ್ಟವಾಗಬಹುದು ಒಂದು ವೇಳೆ ತಾವು ಸಹ ಬಿಜೆಪಿ ಸೇರಿದಲ್ಲಿ ಆಡಳಿತ ಪಕ್ಷದಲ್ಲಿ ಇರಬಹುದಾಗಿದೆ  ಎನ್ನುವ ಲೆಕ್ಕಾಾಚಾರದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾಾರೆ ಎನ್ನಲಾಗಿದೆ.
ಆಪ್ತರ ಸಲಹೆ
ಮುಖಂಡರ ಈ ನಡೆಗೆ ಆಪ್ತರ ಸಲಹೆಗಳು ಸಹ ಕಾರಣವಾಗಿವೆ ಎಂದು ಹೇಳಲಾಗುತ್ತಿಿದೆ. ಈಗಾಗಲೇ ಸಿದ್ಧರಾಮಯ್ಯ ಹಾಗೂ ಲಿಂಗಾಯಿತ ಮುಖಂಡರ ಸಂಬಂಧಗಳು ಹಳಸಿದ್ದು ಕೇವಲ ಅಹಿಂದ ಹಾಗೂ ಅಲ್ಪ ಸಂಖ್ಯಾಾತರನ್ನು ಮಾತ್ರವೇ ಓಲೈಸಲಾಗುತ್ತಿಿದೆ. 2013ರಲ್ಲಿ ಆಡಳಿತಕ್ಕೆೆ ಬಂದಾಗಿನಿಂದಲೂ ಲಿಂಗಾಯಿತ ನಾಯಕರ ಮಾತಿಗೆ ಬೆಲೆ ನೀಡಿದ್ದು ಅಷ್ಟಕಷ್ಟೇ ಅಲ್ಲದೇ ಮುಂದಿನ ಚುನಾವಣೆಯಲ್ಲಿ ಎಲ್ಲ ಲಿಂಗಾಯಿತ ಸಮುದಾಯದ ಸ್ವಾಾಮೀಜಿಗಳು ಈಗಾಗಲೇ ತಮ್ಮ ಮಠಗಳಿಗೆ ಭಕ್ತರಾಗಿರುವ ಸಮಾಜದ ಮುಖಂಡರನ್ನು ಕರೆದು ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಿ ಮಾಡಲು ಎಲ್ಲರೂ ಒಂದಾಗಬೇಕಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾಾರೆ ಎನ್ನಲಾಗಿದ್ದು, ಇದೇ ವೇಳೆ ತಾವು ಸಹ ಗೆದ್ದೆೆತ್ತಿಿನ ಬಾಲ ಹಿಡಿದರೆ ಸಮುದಾಯದಲ್ಲೂ ಉತ್ತಮ ಹೆಸರು ಗಳಿಸುವುದು ಸಹ ಸಾಧ್ಯವಾಗಲಿದೆ ಎಂಬ ಸಲಹೆ ಆಪ್ತರಿಂದ ಬಂದಿದೆ. ಇದರಿಂದಾಗಿ ಇರುವ ಅಧಿಕಾರ ಬಳಸಿ ಲಿಂಗಾಯಿತ ಮುಖಂಡರು ಹಾಗೂ ಆಪ್ತರಿಗೆ ಅನುಕೂಲ ಮಾಡಿಕೊಟ್ಟು ಡಿಸೆಂಬರ್ ವೇಳೆಗೆ  ಪಕ್ಷ ಸೇರುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿಿದೆ.
ಮಾಜಿ ಶಾಸಕಿಗೆ ಇರುಸು ಮುರುಸು
ಈಗಾಗಲೇ 2008ರ ಚುನಾವಣೆಯಲ್ಲಿ ಗೆಲವು ದಾಖಲಿಸಿ ಸಾಧನೆ ಮಾಡಿದ್ದ ಜಿಲ್ಲೆೆಯ ಮಾಜಿ ಶಾಸಕಿಗೆ ಕಾಂಗ್ರೆೆಸ್ ಮುಖಂಡರ ಪಕ್ಷ ಸೇರ್ಪಡೆ ಸುದ್ದಿ ಸಾಕಷ್ಟು ಇರುಸು ಮುರುಸು ತರಿಸಿದೆ. ಜಿಪಂಯಿಂದಲೂ ರಾಜಕೀಯ ವೈರಿಗಳೆಂದೆ ಬಿಂಬಿತವಾಗಿರುವ ಇಬ್ಬರ ನಡುವೆ ಸಾಕಷ್ಟು ರಾಜಕೀಯ ವೈರತ್ವ ವಿದೆ. ಆದರೆ ಕಳೆದ ಬಾರಿ ಠೇವಣಿ ಕಳೆದುಕೊಂಡ ಮೇಲೆ ಕ್ಷೇತ್ರದ ಜನತೆ ಜತೆ ಬೇರೆಯದೆ ಪಕ್ಷವನ್ನು ಕಟ್ಟುವಲ್ಲಿ ಅವರು ಸಹ ವಿಫಲರಾಗಿರುವುದು ಬಿಜೆಪಿ ಈ ನಡೆಗೆ ಕಾರಣವಾಗಿದೆ.
ಕಲಘಟಗಿ ಟಾರ್ಗೆಟ್
ಕಳೆದೆರೆಡು ಚುನಾವಣೆಗಳಿಂದ ಕಾಂಗ್ರೆೆಸ ತೆಕ್ಕೆೆಗೆ ಜಾರಿರುವ ಕಲಘಟಗಿ ಕ್ಷೇತ್ರವನ್ನು ಮತ್ತೆೆ ವಾಪಸ್ಸು ಪಡೆಯುವ ನಿಟ್ಟಿಿನಲ್ಲಿ ಸಾಕಷ್ಟು ಶ್ರಮ ವಹಿಸುತ್ತಿಿರುವ ಬಿಜೆಪಿಗೆ ಕಾಂಗ್ರೆೆಸ್ ಮುಖಂಡರ ಬಿಜೆಪಿ ಸೇರ್ಪಡೆ ಆನೆ ಬಲ ನೀಡಲಿದೆ. ಕಾರಣ ಹೊಸ ತಾಲೂಕಾಗಿ ಘೋಷಣೆಯಾಗಿರುವ ಅಳ್ನಾಾವರ ಕಲಘಟಗಿ ಮತಕ್ಷೇತ್ರದ ವ್ಯಾಾಪ್ತಿಿಗೆ ಬರುತ್ತಿಿದ್ದು ಅಲ್ಲಿ ಕಾಂಗ್ರೆೆಸ್ ಮುಖಂಡರು ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾಾರೆ. ಒಂದು ವೇಳೆ ಇವರು ಬಿಜೆಪಿಗೆ ಬಂದಿದ್ದೇ ಆದಲ್ಲಿ ಲಾಡ್ ಪ್ರತಿನಿಧಿಸುವ ಕಲಘಟಗಿ ಕ್ಷೇತ್ರ ವಶಪಡಿಸಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ ಎನ್ನುವುದು ಬಿಜೆಪಿ ಮುಖಂಡರ ಲೆಕ್ಕಾಾಚಾರವಾಗಿದೆ. ಇನ್ನೂ ಕೈ ಕಳೆದ ಬಾರಿ ಕೈ ತಪ್ಪಿಿ ಹೋಗಿರುವ ನವಲಗುಂದ ತಾಲೂಕಿನಲ್ಲಿ ಈ ಮುಖಂಡರ ಮೂಲ ಸ್ಥಾಾನವಾದ ಹಿನ್ನೆೆಲೆಯಲ್ಲಿ ಅಲ್ಲಿಯೂ ಸಹ ಮುನೇನಕೊಪ್ಪ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಲೆಕ್ಕಾಾಚಾರದಲ್ಲಿ ಬಿಎಸ್‌ವೈಗೆ ಇಲ್ಲಿನ ಮುಖಂಡರು ಅವರನ್ನು ಬಿಜೆಪಿ ಕರೆ ತರಲು ತೆರೆ ಮರೆಯ ಕಸರತ್ತು ನಡೆಸಿದ್ದಾಾರೆ ಎಂದು ತಿಳಿದು ಬಂದಿದೆ.
ಒಟ್ಟಿಿನಲ್ಲಿ ಕಾಂಗ್ರೆೆಸ್‌ನ ಈ ಲಿಂಗಾಯಿತ ಮುಖಂಡರ ನಡೆಯಿಂದಾಗಿ ಜಿಲ್ಲೆೆಯ ಬಹುತೇಕ ಕಡೆ ಕಮಲ ಅರಳುವ ಸಾಧ್ಯತೆಗಳಿದ್ದು ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದಲ್ಲಿ ಕಾಂಗ್ರೆೆಸ್ ನಷ್ಟ ಅನುಭವಿಸುವುದಂತೂ ಗ್ಯಾಾರಂಟಿ.

Wednesday, February 3, 2016

ನಾನು ಮಾಡಿದರೆ ಮಾಫಿ ಉಳಿದವರು ಮಾಡಿದರೆ ಮಾಫೀಯಾ

ಅದು 2010 ರ ಸಮಯ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿತ್ತು. ಆಗ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರಲು ನೂರಾರು ಕೋಟಿ ಸುರಿದ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಮುಟ್ಟಿದ್ದೇಲ್ಲ ಚಿನ್ನ. ಅದು ಸಚಿವ ಸಂಪುಟ ಸಭೆ ಇರಬಹುದು ಅಥವಾ ವೈಯಕ್ತಿಕ ಖಾತೆಗಳ ನಿರ್ವಹಣೆ ಇರಬಹುದು ಎಲ್ಲವೂ ಅವರ ಆದೇಶದಂತೆಯೇ ನಡೆಯುತ್ತಿತ್ತು. ( ಬಳ್ಳಾರಿ ಕೆಲ ಹಿರಿಯ ಪತ್ರಕರ್ತರ ಊಹೆ ಪ್ರಕಾರ ಬಿಎಸ್ ವೈಕೂಡ ದೂರವಾಣಿ ಮಾತನಾಡಬೇಕಾದರೆ ಅದಕ್ಕೆ ಅವರ ಅನುಮತಿ ಬೇಕಿದ್ದಿರಬಹುದಾಗಿತ್ತು) ಅಷ್ಟರ ಮಟ್ಟಿಗೆ ಸರಕಾರವನ್ನು ಹಾಗೂ ರಾಜ್ಯವನ್ನು ಹಿಡಿತದಲ್ಲಿಟ್ಟಿಕೊಂಡಿದ್ದ ಸಮಯವದು. ಆ ಸಮಯದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ  ಇಂದಿನ ಮುಖ್ಯಮಂತ್ರಿ ಸಿದ್ದಣ್ಣ ತೋಳುತಟ್ಟಿ ಪಂದ್ಯ ಸ್ವೀಕರಿಸಿ ಪಾದಯಾತ್ರೆ ಮೂಲಕ ಬಳ್ಳಾರಿ ತಲುಪಿ ಬಳ್ಳಾರಿ ರಿಪಬ್ಲಿಕ್ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ ಇಂದು ಅದೇ ಬಳ್ಳಾರಿ ಮತ್ತೆ ರಿಪಬ್ಲಿಕ್ ಆಗುತ್ತಿದೆ.
ಹೌದು ಇದನ್ನು ನೀವು ನಂಬಲೇ ಬೇಕು ಕಾಂಗ್ರೆಸ್ ಆಡಳಿತ ಬಂದ ಮೇಲೆ ಬಳ್ಳಾರಿಯ ಉಸ್ತುವಾರಿ ಹೊತ್ತ  ಪಿಟಿಪಿ ( ಪಿ.ಟಿ.ಪರಮೇಶ್ವನಾಯ್ಕ್) ಇಂದು ಜನರ ಪಾಲಿಗೆ ಖಳ ನಾಯಕರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಮಾಡಿದ ಅವಾಂತರಗಳನ್ನು ವಿವಿಧ ಮಾಧ್ಯಮಗಳು ಎಳೆಎಳೆಯಾಗಿ ಬಿಚ್ಚಿಟ್ಟಿದ್ದನ್ನುನೋಡಿದರೆ ಮತ್ತೆ ಬಳ್ಳಾರಿಗೆ ರಿಪಬ್ಲಿಕ್ ಪಟ್ಟ ಗ್ಯಾರಂಟಿ ಅನ್ನುವಂತಾಗಿದೆ. ಒಂದು ವೇಳೆ ಅನುಪಮಾ ಶಣೈ ವರ್ಗಾವಣೆ ಆಗಿದ್ದಿದ್ದರೆ ಅದನ್ನು ಬಳ್ಳಾರಿ ವಿಜಯ ಕರ್ನಾಟಕ ವರದಿಗಾರ ಶಶಿಧರ ಮೇಟಿ ರಾಜ್ಯಕ್ಕೆ ಪರಿಚಯಿಸಿದಿದ್ದರೆ ಇದು ಮಾಮೂಲಿ ವರ್ಗಾವಣೆ ಎಂದೇ ಬಿಂಬಿತವಾಗುತ್ತಿತ್ತು. ಆದರೆ ಪ್ರಾಮಾಣಿಕ ಪತ್ರಕರ್ತರಲ್ಲಿ ಒಬ್ಬರಾಗಿರುವ ಮೇಟಿ ಅದರ ಜಾಡು ಹಿಡಿದು ಹೊರಟಾಗ ಸಿಕ್ಕ ಸುಳಿವು ಇಂದು ಅವರ ವ್ಯಕ್ತಿತ್ವವನ್ನು ಮತ್ತಷ್ಟು ಮೇಲ್ಲಕ್ಕೆ ಏರಿಸಿದೆ. ಇದಾದ ನಂತರವೂ ಸಹ ಪಿಟಿಪಿ ನಾನು ಮಾಡೆಯಿಲ್ಲ ನನಗೂ ಅದಕೂ ಸಂಬಂಧವೇ ಇಲ್ಲ ಎಂದು ಕಡ್ಡಿ ಮುರಿದಂತೆ ಮಾತನಾಡಿದ್ದರು ಆದರೆ ಚುನಾವಣೆ ಪ್ರಚಾರದಲ್ಲಿ ಶೋ ಮಾಡಲು ( ಜಂಭಕೊಚ್ಚಿಕೊಳ್ಳಲು)ಹೋಗಿ ಸಿಕ್ಕಿ ಹಾಕಿಕೊಳ್ಳುವ ಮೂಲಕ ಮಾಧ್ಯಮಗಳಿಗೆ ಆಹಾರವಾದರು. ಈ ವಿಷಯ ಸಹ ಅಲ್ಲೆ ಸತ್ತು ಹೋಗುತ್ತಿತ್ತೋ ಏನೋ ಆದರೆ ಈಟಿವಿ ನ್ಯೂಸ್ ನ ವರದಿಗಾರ ಶರಣು ಹಂಪಿ ಸಿಕ್ಕ ಆಡಿಯೋ ತುಣಕನ್ನು ಮೊದಲು ಭಿತ್ತರಿಸುವ ಮೂಲಕ ನಾಯಕನ ಪಟ್ಟವನ್ನು ಕಸಿದುಕೊಳ್ಳುವಂತಾಯಿತು. ಈ ನಡುವೆ ನೆರೆ ಜಿಲ್ಲೆಯ ಶಾಸಕರು ಕೂಡ  ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ನಾಯಕ್ ಹೆಡೆ ಮುರಿ ಕಟ್ಟಿವಲ್ಲಿ ತೆರೆಯ ಹಿಂದಿನ ತಮ್ಮ ಚಾಣಕ್ಷ್ಯ ನೀತಿಯನ್ನು ಪ್ರದರ್ಶಿಸಿದ್ದಾರೆ. ತಮಗೆ ಸಿಕ್ಕ ಎಲ್ಲ ಸಾಕ್ಷಿಗಳನ್ನು ನಿರ್ಭೆಡೆಯ ಮಾಧ್ಯಮಗಳಿಗೆ ಕೊಟ್ಟ ಅವರುಗಳು ಆ ಮೂಲಕ ತಮ್ಮ ರಾಜಕೀಯ ನಡೆಯನ್ನು ಚದುರಂಗದಾಟಕ್ಕೆ ಹೊಲಿಸಿಕೊಂಡಿದ್ದಾರೆ. ಕಾರಣ ಈ ಹಿಂದೆ ಆ ಶಾಸಕರು ಒಂದು ಸಂಸ್ಥೆಯ ಅಧ್ಯಕ್ಷರಾಗುವ ಸಂದರ್ಭದಲ್ಲಿ ಇದೇ ಪಿಟಿಪಿ ಅಡ್ಡಗಾಲು ಹಾಕಿದ್ದರು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಿದೆ.
ರಿಪಬ್ಲಿಕ್ ಹೇಗಾಯ್ತು ?
ಏನ್ರಿ ನೀವು ಜನಾರ್ಧನ ರೆಡ್ಡಿಗೂ ಪಿಟಿಪಿಗೂ ಹೋಲಿಕೆ ಮಾಡೋದಾ ಅವರೆಲ್ಲಿ ಇವರೆಲ್ಲಿ ಎಲ್ಲಿಯ ಹೆಲಿಕ್ಯಾಪ್ಟರ ಎಲ್ಲಿನ ಇನ್ನೋವಾ ಕಾರು ಎಂದು ಆಡಿಕೊಳ್ಳುವವರಿಗೆ ಒಂದು ಮಾತು ಹೇಳಲೇಬೇಕು. ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ ಅಭಿವೃದ್ಧೀ ಕಾರ್ಯಗಳನ್ನು ನೋಡಿದರೆ ಪಿಟಿಪಿ ಸಾಧನೆ ಶೂನ್ಯ ಎನಿಸುವುದರಲ್ಲಿ ಸಂಶಯವಿಲ್ಲ. ರೆಡ್ಡಿ ಸಹೋದರರು ಮಾಡಿದ್ದರೆನ್ನಲಾದ ಅಕ್ರಮ ಗಣಿಗಾರಿಕೆ ಸೇರಿದಂತೆ ಎಲ್ಲ ಕೇಸುಗಳು ಕೋರ್ಟನಲ್ಲಿದ್ದು ಅದನ್ನು ಇಲ್ಲಿ ಪ್ರಸ್ತಾಪಿಸುವುದು ಸೂಕ್ತವಲ್ಲ. ಅದನ್ನು ಬಿಟ್ಟು ಮಾತನಾಡುವುದಾದರೆ ಬಳ್ಳಾರಿಯಲ್ಲಿ ಅಭಿವೃದ್ಧಿಯಾಗಿದೆ ಎನ್ನುವುದನ್ನು ಅವರ ರಾಜಕೀಯ ವಿರೋಧಿಗಳೇ ಒಪ್ಪಿಕೊಳ್ಳುತ್ತಾರೆ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಒಂದಿಷ್ಟು ಕಾಳಜಿ ತೋರಿಸದ ಪಿಟಿಪಿ ಕೇವಲ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಬೇರೆ ಎಲ್ಲ ವಿಚಾರಗಳಲ್ಲಿಯೂ ಸಹ ಕಾಳಜೀ ತೋರಿಸಿರುವುದು ರಿಪಬ್ಲಿಕ್ ಎನ್ನುವ ಪದಕ್ಕೆ ಅರ್ಥ ನೀಡುತ್ತದೆ. ನನಗೆ ಗೊತ್ತಿರುವುವಂತೆ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದ ಪಿಟಿಪಿ ಮರಳನ್ನು ಬೆಂಗಳೂರಿಗೆ ಸಾಗಿಸುವಂತೆ ಸಿಎಂ ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹೇಳಿದ್ದರು. ಅಂದರೆ ಅಕ್ರಮ ಮರಳು ಸಾಗಣೆ ಇವರಿಗೆ ತಿಳಿದಿತ್ತು ಅದರಲ್ಲಿ ತಮ್ಮ ಪಾಲು ಇತ್ತು ಎಂದು ಒಪ್ಪಿಕೊಂಡಂತೆ ಅಲ್ಲವೇ? ಇದೇ ರೀತಿ ಬೇರೆ ಬೇರೆ ವಿಚಾರಗಳು ಈಗಾಗಲೇ ಮಾಧ್ಯಮಗಳಲ್ಲಿ ಬಂದಿರುವಂತೆ ನಡೆದಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಅಂದರೆ ನಾನು ಹೇಳಿದ್ದ ಸತ್ಯ, ನಾನು ಮಾಡಿದ್ದೇ ಕಾನೂನು ನಾನು ಹೋದಿದ್ದೆ ಹಾದಿ ಎಂದು ಹೇಳಿ ಅಧಿಕಾರವನ್ನು ದುರಪಯೋಗ ಪಡಿಸಿಕೊಂಡ ಪಿಟಿಪಿ ದರ್ಬಾರ್ ಗೆ ಬಳ್ಳಾರಿ ರಿಪಬ್ಲಿಕ್ ಆಗಿದೆ ಎಂದರೆ ತಪ್ಪೇನಿಲ್ಲ.
ಒಟ್ಟಿನಲ್ಲಿ ಹಾರಾಟ ಚೀರಾಟದ ಮೂಲಕ ಮತ್ತೆ ಬಳ್ಳಾರಿಯಲ್ಲಿ ನೆಲೆ ಕಂಡುಕೊಂಡ ಕಾಂಗ್ರೆಸ್ ಜನಾರ್ಧನ ರೆಡ್ಡಿ ಸರ್ವಾಧಿಕಾರಿ ಎಂದು ಹೇಳಿ ಓಟು ಗಿಟ್ಟಿಸಿಕೊಂಡಿತ್ತಲ್ಲ.ಈಗ ಹಡಗಲಿ ಮನೆಯಲ್ಲಿ ಕುಳಿತು ಜಿಲ್ಲೆಯಲ್ಲಿನ ಎಲ್ಲ ಅಧಿಕಾರವನ್ನು ನಿಯಂತ್ರಿಸುತ್ತಿರುವ ಪಿಟಿಪಿ ಬಗ್ಗೆ ಏನು ಹೇಳುತ್ತೇ?
ಇದರ ಅರ್ಥ ಇಷ್ಟೇ ನಾನು ಮಾಡಿದರೆ ಮಾಫಿ ಉಳಿದವರು ಮಾಡಿದರೆ ಮಾಫೀಯಾ ಎನ್ನುವ ಹೊಸ ಗಾದೆಯನ್ನು ಸೃಷ್ಟಿಸಿಕೊಂಡಿದೆ

Monday, January 25, 2016

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ.