Monday, January 25, 2016

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

Thursday, January 14, 2016

ಗುಳೇದ ಲಕ್ಕಮ್ಮ

ಜಾತ್ರೆಯೆಂದಾಕ್ಷಣ ಊರಿನಲ್ಲಿ ಸದ್ದು ಗದ್ದಲ ಇರುತ್ತದೆ, ಆದರೆ ಈ ಊರಲ್ಲಿ ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆಯವರಿಗೆ ಯಾರೊಬ್ಬರು ಕಾಣುವುದಿಲ್ಲ! ಪ್ರತಿಯೊಂದು ಮನೆ, ಊರಿನ ಆಸ್ಪತ್ರೆ, ಶಾಲೆ, ಅಂಚೆ ಕಚೇರಿಗೆ ಬೀಗ ಹಾಕಿರುತ್ತಾರೆ. ನೀರವ ಮೌನ ಆವರಿಸುತ್ತದೆ. ಇದು ಈ ಗ್ರಾಮದ ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಎಲ್ಲಲ್ಲಿ ಜನವಸತಿ ಇದೇಯೋ ಅಲ್ಲಲ್ಲಿ ದೇವರುಗಳು ಕೂಡ ಇವೆ. ಅವುಗಳಿ ಪ್ರತಿವರ್ಷ ಜಾತ್ರೆಗಳು ಕೂಡ ನಡೆಯುತ್ತವೆ. ಆ ಸಂದರ್ಭದಲ್ಲಿ ಊರಿನಲ್ಲಿ ಸಡಗರವೋ ಸಡಗರ. ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಜಾತ್ರೆ ಮಾಡುವುದು ಸಂಪ್ರದಾಯ ಆದರೆ ಈ ಊರಿನಲ್ಲಿ ಮಾತ್ರ ಜಾತ್ರೆಯ ದಿನ ಊರೆ ಖಾಲಿಯಾಗುತ್ತದೆ. ಹೌದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಇಂತಹ ವಿನೂತನ ಪದ್ಧತಿ ಇದೆ. ಪ್ರತಿಯೊಬ್ಬರು ಊರ ಹೊರಗೆ ನಡೆಯುವ ತಮ್ಮೂರ ಜಾತ್ರೆಗೆ ಮನೆ ಬೀಗ ಹಾಕಿಕೊಂಡು ಹೋಗುತ್ತಾರೆ, ಯಾವೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ. ಪ್ರತಿವರ್ಷ ಶೂನ್ಯ ಮಾಸದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ, ಜಾತ್ರೆ ಮಾಡುವಾಗ ಈ ಗ್ರಾಮದಲ್ಲಿ ಇಂತಹ ವಿಶೇಷ ಸಂಪ್ರದಾಯವನ್ನು ಆಚರಣೆ ಮಾಡುತ್ತಾರೆ. ಅಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30ರವರೆಗೆ ಊರೊಳಗೆ ಪ್ರವೇಶ ಮಾಡುವಂತಿಲ್ಲ. ಇನ್ನೂ ಗ್ರಾಮ ದೇವತೆಯಾಗಿರುವ ಲಕ್ಕಮ್ಮ ಮೂಲತಃ ಶಾನಭೋಗರ ಮನೆಯ ಹೆಣ್ಣು ಮಗಳು ಎಂಬ ನಂಬಿಕೆಯಿದ್ದು, ಅವಳನ್ನು ಗೌಡರ ಮನೆಗೆ ಕೊಡಲಾಗಿತ್ತು ಎಂಬ ಪ್ರತೀತಿ ಇದೆ. ಅದಕ್ಕಾಗಿ ಇಂದಿಗೂ ಕೂಡ ಜಾತ್ರೆಯ ಸಂದರ್ಭದಲ್ಲಿ ಗೌಡರ ಮನೆಯಿಂದಲೇ ಆಕೆಗೆ ಮುತ್ತೈದೆ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ
 ಈ ಊರಿನಿಂದ ಒಂದುವರೆ ಕಿ.ಮೀ ದೂರದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ. ಗ್ರಾಮದಲ್ಲಿ ಸುಮಾರು 2000 ಮನೆಗಳು 8,500 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಜಾತ್ರೆಯ ದಿನ ದೇವಿಯ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಲಕ್ಕಮ್ಮ ಮೂಕಿ ದೇವತೆ ಆದದರಿಂದಲೋ ಏನೋ ದೇವಿಯ ಮುಂದೆ ಜೋರಾಗಿ ಉರಿಮೆಯನ್ನ ಬಡೆಯಲಾಗುತ್ತದೆ. ಗ್ರಾಮದ ತುಂಬ ಸುತ್ತವ ದೇವಿ ನಂತರ ಊರ ಹೊರಗಿನ ಪ್ರದೇಶಕ್ಕೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಯಾರೂ ಇರುವಂತಿಲ್ಲ .ಅಂದು ಹುಟ್ಟಿದ ಕೂಸು, ಬಾಣಂತಿ, ಹಾಸಿಗೆ ಹಿಡಿದ ಹಿರಿಯ ಜೀವಗಳು, ಮಕ್ಕಳು, ಅಂಗವಿಕಲರು ಸೇರಿ ಯಾರೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ, ಎಲ್ಲರೂ ಜಾತ್ರೆಗೆ ಮನೆಯ ಬೀಗ ಹಾಕಿಕೊಂಡು ಹೋಗಬೇಕು. ಒಂದು ವೇಳೆ ಯಾರಾದರೂ ಮೃತಪಟ್ಟರೆ, ಶವ ಸಂಸ್ಕಾರ ಕೂಡ ಮಾಡುವಂತಿಲ್ಲ. ಇನ್ನೂ ಊರನ್ನು ಕಾಯಲು ನಾಲ್ಕೈದ ಜನ ತಳವಾರರನ್ನು ನೇಮಿಸಲಾಗಿರುತ್ತದೆ. ಅವರು ಊರ ಅಗಸಿಯಲ್ಲಿ ಬೇಲಿ ಹಾಕಿಕೊಂಡು ಈಡಿ ದಿನ ಯಾರೂ ಊರ ಒಳಗಡೆ ಹೋಗದಂತೆ ಕಾಯುತ್ತಿರುತ್ತಾರೆ
: ಇತ್ತ ಗುಳೆಹೋದ ತಂಡ ಮರದ ನೆರಳನ್ನು ಆಶ್ರಯಿಸುತ್ತಾರೆ. ಬಂಧುಗಳಿಗೆ ಸಂಭ್ರಮದ ಸ್ವಾಗತ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ನೀಡಿ, ಉಪಚರಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಭೋಜನವಂತೂ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ , ಅಗಸೆ ಚಟ್ನಿ, ಗುರಳ್ಳ ಚಟ್ನಿ, ಕಡಲೇ ಚಟ್ನಿ ವಿವಿಧ ರೀತಿಯ ಪಲ್ಯಗಳು ಹಾಹಾ.. ಅದನ್ನೂ ಸವಿದವರು ಎಂದು ಕೂಡ ಲಕ್ಕಮ್ಮನ ಜಾತ್ರೆಯನ್ನು ಮರೆಯಲಾರರು ಎನ್ನುವಷ್ಟರ ಮಟ್ಟಿಗೆ ಖಾದ್ಯಗಳು ಆಹಾರ ಪ್ರಿಯರನ್ನು ಸೆಳೆಯುತ್ತವೆ.
 ಕೆಲವೊಂದು ಸಂಪ್ರದಾಯಗಳು ಧರ್ಮದ ಭಾವನೆಗಳನ್ನು ಮೀರಿಸುತ್ತವೆ ಎನ್ನುವುದಕ್ಕೆ ಚೋರನೂರು ಗ್ರಾಮವೇ ಉದಾಹರಣೆಯಾಗಿದೆ. ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮನೆಗಳು, ಕೆಲವೊಂದು ಕ್ರಿಶ್ಚಿಯನ್ ಸಮುದಾಯದ ಮನೆಗಳು, ಇವರು ಕೂಡ ಗುಳೇದ ಲಕ್ಕಮ್ಮ ಜಾತ್ರೆ ಆಚರಿಸುತ್ತಾರೆ, ಇವರು ಕೂಡ ಬೀಗ ಹಾಕಿ ಜಾತ್ರೆಗೆ ಹೋಗಿ, ಜಾತ್ರೆಯನ್ನು ಆಚರಿಸುವ ಸಂಪ್ರದಾಯವು ಧರ್ಮಗಳ ಭಾವನೆಯನ್ನು ಮೀರಿಸಿದೆ. ಅನಾದಿಕಾಲದಿಂದ ಇಂತಹ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆ ಯವರಿಗೆ ಎಲ್ಲಾ ಮನೆಗಳಿಗೆ ಬೀಗ ಹಾಕುತ್ತಾರೆ, ಯಾರೊಬ್ಬರು ಇಂತಹ ಸಂಪ್ರದಾಯ ಮುರಿಯುವುದಿಲ್ಲ. ಎಲ್ಲಾ ಜನರು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಇನ್ನೂ ಗ್ರಾಮದ ಕೆರೆ ಅಂಗಳದಲ್ಲಿ ಸೇರುವ ಭಕ್ತರು ತಮ್ಮ ಜಾನುವಾರುಗಳನ್ನು ಬೆದರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ.
 ಊರ ಹೊರಗಡೆ ಪ್ರತಿಷ್ಠಾಪನೆಗೊಳ್ಳುವ ದೇವಿಗೆ ಭಕ್ತರು ತಮ್ಮದೇಯಾದ ರೀತಿಯಲ್ಲಿ ಭಕ್ತಿ ಸಮರ್ಪಿಸುತ್ತಾರೆ. ಅದರಲ್ಲೂ ಯುವ ಜನರು ಸಂಪ್ರದಾಯದಂತೆ ಕೋಲಾಟವನ್ನು ಆಡುವ ಮೂಲಕ ಜಾತ್ರಗೆ ವಿಶೇಷ ಮೆರಗು ನೀಡಿ ಜನರನ್ನು ರಂಜಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ವಿಶೇಷ. ಇನ್ನೂ ಮತ್ತೆ ಸಂಜೆ ಗೋಧೂಳಿ ಸಮಯಕ್ಕೆ ಸರಿಯಾಗಿ ಚರಗವನ್ನು ಚೆಲ್ಲುತ್ತಾ ಮುಂದೆ ಮುಂದೆ ಸಾಗುತ್ತಾರೆ. ಲಕ್ಕಮ್ಮ ದೇವಿಯ ಹೊತ್ತು ಮೆರವಣಿಗೆಯ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಾರೆ.ಜಾತ್ರೆಯಲ್ಲಿ ಸಾಮೂಹಿಕವಾಗಿ ವನಬೋಜನ ಮಾಡುವುದರ ಮೂಲಕ  ಹಳೆಯ ಜಗಳ, ಮನಸ್ತಾಪಗಳನ್ನು ಮರೆತು ಒಂದಾಗುತ್ತಾರೆ. ಜಾತ್ರೆಯನ್ನು ಊರಾಚೆ ಹೋಗಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಇತ್ಯಾದಿ ಅನಿಷ್ಠಗಳು ಬರುವುದಿಲ್ಲವೆಂದು ನಂಬುತ್ತಾರೆ.
ಒಟ್ಟಿನಲ್ಲಿ ವಸುದೈವ ಕುಟುಂಬಕಂ ಎನ್ನುವ ಮಾತನ್ನು ಆಚರಣೆಗೆ ತರುವ ಮೂಲಕ ಗುಳೆ ಲಕ್ಕಮ್ಮನ ಹೆಸರಿನಲ್ಲಿ ಒಂದಾಗಿರುವ ಚೋರುನೂರು ಗ್ರಾಮ ಬೇರೆ ಗ್ರಾಮಗಳಿಗೆ ಆದರ್ಶನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ( ತುತಾ೵ಗಿ ಬರೆದಿರುವ ಕಾರಣ ಕಾಗುಣಿತ ಹಾಗೂ ವಾಕ್ಯ ರಚನೆ ಸರಿಯಾಗಿರದಿದ್ದರೆ ಸರಿಮಾಡಿಕೊಂಡು ಓದಿ)