Friday, December 27, 2013

ಈಡೆರದ ಆಸೆ : ಅಮರನಾದ ಪ್ರೇಮ

ನಿಜಕ್ಕೂ  ಈ ಪ್ರೇಮ ಕಥೆಯ ಕೊನೆಯ ಕಂತನ್ನೂ ಬರೆಯಲು ತುಂಬಾನೇ ಕಷ್ಟವಾಗುತ್ತಿದೆ.

ಸುಮಾರು ವರ್ಷಗಳ ಕಾಲ ಬಚ್ಚಿಟ್ಟಿದ್ದ ಪ್ರೇಮವನ್ನು ಹೇಳಿಕೊಂಡಿದ್ದ ನಾಯಕ ಪ್ರೇಮ ಹಾಗೂ ಅದನ್ನು ಕೇಳಿ ದುಃಖಿತಳಾಗದ್ದ ನಾಯಕಿ ರಮ್ಯಾ ಈಗ ಮತ್ತೆ ದೂರವಾಗುತ್ತಿದ್ದಾರೆ. ಕಾರಣ ಅವಳು ಗೃಹಿಣಿ. ಸಮಾಜದಲ್ಲಿ ಈ ರೀತಿಯ ಸಂಬಂಧಕ್ಕೆ ಯಾವುದೇ ಬೆಲೆ ಇರದು ಎಂದು ಅರಿತಿದ್ದ ಪ್ರೇಮ ಇಷ್ಟು ವರ್ಷಗಳಾದರೂ ಅದನ್ನು ಹೇಳಿರಲಿಲ್ಲ. ಆದರೆ ಅವಳು  ಒತ್ತಾಯಮಾಡಿದಳೆಂಬ ಕಾರಣಕ್ಕೆ ಪ್ರೀತಿಸುತ್ತಿರುವ  ವಿಷಯ ಹೇಳಿದ ಪ್ರೇಮನಿಗೆ ಒಳಗೊಳಗೆ ಅಪರಾಧಿ ಮನೋಭಾವನೆ ಕಾಡಹತ್ತಿತು. ಈ ನಡುವೆ ಅವಳಿಗೆ ಸಂದೇಶ ಕಳುಹಿಸಿದ ಪ್ರೇಮನಿಗೆ ಬಂದ  ಉತ್ತರ ಅವನನ್ನು  ಇನ್ನಷ್ಟು ಗಾಸಿ ಘೋಳಿಸಿದ್ದವು. ಸ್ನೇಹಿತರಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲಿಯೂ ಸಹ ಎಂದು ಆತ ಅವಳ ಮೇಲೆ ಸಿಟ್ಟು ಮಾಡಿಕೊಂಡವನಲ್ಲ.  ಎಲ್ಲೇ ಮೀರಿದವನೂ ಅಲ್ಲ. ಅವಳನ್ನು ದೇವತೆಯಂತೆ ಪೂಜಿಸುತ್ತಿದ್ದ. ಅವಳನ್ನು ಅಪ್ಪಿ ತಪ್ಪಿಯೂ ಕೆಟ್ಟ ಭಾವನೆಯಿಂದ ಮುಟ್ಟಿದವನು ಅಲ್ಲ. ಅವಳು ಸಹ  ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವನನ್ನು ಪ್ರೀತಿಸುತ್ತಿದ್ದರೂ ಸಹ ಅವಳು ಅವನ ಮುಂದೆ ಎಂದಿಗೂ ಆ ರೀತಿಯ ನಡುವಳಿಕೆ ತೋರಿರಲಿಲ್ಲ. ಕಾರಣ ಮತ್ತದೇ ಸ್ನೇಹ. ಇಷ್ಟು ಗಾಡವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಅದನ್ನು ವ್ಯಕ್ತಪಡಿಸಿದ  ಇಬ್ಬರೂ ಈಗ ಕಣ್ಣಿರಿನಲ್ಲಿ ಕೈ  ತೊಳಯುವಂತಾಗಿತ್ತು. ಆದರೆ ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇತ್ತು. ಆದರೆ  ನಾಯಕ ಪ್ರೇಮ ಮಾತ್ರ ಮನೆಯಲ್ಲಿ ಮದುವೆ ಮಾತು ಎತ್ತಿದರೆ ಸಾಕು ಉರಿದು ಬೀಳುತ್ತಿದ್ದ. ಅವನನ್ನು ಇಷ್ಟಪಟ್ಟಿದ್ದ ಹಲವಾರು ಹುಡುಗಿಯರು ಅವನೆದರು ಮಂಡಿಯೂರಿ ಕುಳಿತರು ಅವನು ಜಪ್ಪಯ್ಯ  ಎನ್ನಲಿಲ್ಲ. ಅದರಲ್ಲೂ ಒಂದು ಹುಡುಗಿಯಂತೂ ಆತ್ಮಹತ್ಯೆಗೆ ಯತ್ನಿಸಿದ್ದರೇ ಇನ್ನೋಬ್ಬಳು ತನ್ನ ಸರ್ವಸ್ವವನ್ನು ಈತನಿಗೆ ಧಾರೆ ಎರೆಯಲು ಕಾತುರಳಾಗಿದ್ದಳು ಆದರೂಸಹ ಪ್ರೇಮ ಮಾತ್ರ ಅದ್ಯಾವುದಕ್ಕೂ ಬೆಲೆ ನೀಡದೆ ತನ್ನ ಗುಪ್ತ ಪ್ರೇಯಸಿ ರಮ್ಯಳನ್ನು ಪ್ರೀತಿಸುತ್ತಿದ್ದ.
ಈ ನಡುವೆ ಗೃಹಿಣಿಯಾಗಿದ್ದ ರಮ್ಯಾ ಆಗೊಂದು ಈಗೊಂದು ಸಂದೇಶಗಳನ್ನು ಬಿಟ್ಟರೆ ಎಂದೂ ಸಹ ಅವನ ಜತೆ ಮಾತನಾಡುವುದಾಗಲಿ ಭೇಟಿ ಮಾಡುವುದಾಗಲಿ ಮಾಡಲೇಯಿಲ್ಲ. ಅವಳ ಸ್ಥಿತಿಯನ್ನು ಅರಿತಿದ್ದ ಪ್ರೇಮ ಸಹ ತನ್ನ ಪ್ರೇಮವನ್ನು ಬಿಟ್ಟುಕೊಟ್ಟಿದ್ದ.  ಆದರೆ ಅವನ ಮನಸ್ಸಿನಲ್ಲಿ ಅವಳು ಮಾತ್ರ ಅಚ್ಚಳಿಯದೆ ಉಳಿದು ಬಿಟ್ಟಿದ್ದಳು.  ಜತೆಗೆ ತನ್ನ ವ್ಯವಹಾರದಲ್ಲಿ ಲಾಸ್ ಮಾಡಿಕೊಂಡ ಪ್ರೇಮ ಮತ್ತಷ್ಟು ಕೃಷನಾದ. ಇದರಿಂದಾಗಿ ಅವನ ಆರೋಗ್ಯ ಸಹ ಹದಗೆಟ್ಟಿತು. ಆಗ ಅವನ ಮನೆಯವರಿಗೆ ಚಿಂತೆ ಕಾಡಲಾರಂಭಿಸಿತು. ಅವನಿಗೆ ಇದದ್ದು ಒಂದು ಆಸೆ ಅದು ರಮ್ಯಾಳನ್ನು ಲಾಂಗ್ ಡ್ರೈವಗೆ ಕರೆದುಕೊಂಡು ಹೋಗುವುದು, ಅಲ್ಲಿ ಅವನ ಕೈಯಿಂದ ಅವಳಿಗೆ ಊಟ ಮಾಡಿಸುವುದು ಅಷ್ಟೇ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಗಲೇ ಯಿಲ್ಲ. ಇದರಿಂದಾಗಿ ಅವನ ತನ್ನ ಜೀವನವನ್ನೇ ಕೊನೆಗೊಳಿಸಲು ಉದ್ದೇಶಿಸಿದ. ಒಂದು ದಿನ ಮುಂಜಾನೆಯ ಸಮಯದಲ್ಲಿ ಹೊರಟ ಪ್ರೇಮ ಮತ್ತೆ ತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ. ಅಂದು ಮುಂಜಾನೆ ಎದ್ದ ಪ್ರೇಮ ತನ್ನ ನೆಚ್ಚಿನ ಸೂಟ್ ಧರಿಸಿ ಟಿಪ್ ಟಾಪ್ ಆಗಿ ಹೋರಟ, ಕಾಲು ನಡಿಗೆಯಲ್ಲಿ ಸುಮಾರು ದೂರ ನಡೆದ ಮೇಲೆ ಅಲ್ಲಿ ಅವನಿಗೆ ದೂರದ ಬೆಟ್ಟವೊಂದು ಕಾಣಿಸಿತು. ಬೆಟ್ಗದ ತುದಿಗೇರಿದ ಆತ   ಇನ್ನೇನು ಸಾಯಬೇಕು ಎನ್ನುವ ಸಂದರ್ಭದಲ್ಲಿ  ದಿವ್ಯವಾಣಿಯೊಂದು ಕೇಳಿದ ಅನುಭವವಾಯಿತು. ಹಿಂದಿರುಗಿ ನೋಡಿದ ಪ್ರೇಮನಿಗೆ ಸನ್ಯಾಸಿಗಳೊಬ್ಬರು ಆತನನ್ನು ನೋಡುತ್ತಿರುವುದು ಕಾಣಿಸಿತು. ಆಗ ಅವರ ಮಾರ್ಗದರ್ಶನ ಪಡೆದ ಪ್ರೇಮ ಮುಂದೆ ಅವರನ್ನು ಹಿಂಬಾಲಿಸಿದ. ಅವರು ಅವನಲ್ಲಿನ ಆಧ್ಯಾತ್ಮದ ಹಸಿವನ್ನು ಗಮನಿಸಿ ಆತನಿಗೆ ದೀಕ್ಷೆ ನೀಡಿದರು. ಆಗ  ಪ್ರೇಮನಾಗಿದ್ದವ ಬದಲಾಗಿ ಸ್ವಾಮೀ ಪ್ರೇಮಾನಂದ ಗೂರುಜಿಯಾಗಿ ಬದಲಾದ. ಹಿಂದಿನ ಎಲ್ಲ ಘಟನೆಗಳನ್ನು ,ಮರೆತು ಸಮಾಜಕ್ಕೆ ದಾರಿ ದೀಪವಾದ. ಆದರೆ ಅವನನ್ನು ಈ ಹಂತಕ್ಕೆ ತಂದ ರಮ್ಯಾ ಮಾತ್ರ  ಅಲ್ಲೇ ಉಳಿದಳು. ಆದರೆ ಅವನ ಈ ಸ್ಥಿತಿಗೆ ಕಾರಣವಾಗಿದ್ದೂ ಏನು ಎನ್ನುವುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕಾರಣ ಅವನು ಎಲ್ಲಿಯೂ ಸಹ ಅಪ್ಪಿ-ತಪ್ಪಿ ಬಾಯಿಬಿಡಲಿಲ್ಲ.  ಈ ಪ್ರೇಮದಲ್ಲಿ ಅವನ ಆಸೆಗಳು ಈಡೆರಲಿಲ್ಲ ಆದರೆ ಪ್ರೇಮನ ನಿಷ್ಕಲ್ಮಶ ಪ್ರೇಮ -ಪ್ರೀತಿ-ಪ್ಯಾರ- ಇಷ್ಕ -ಮೋಹಬ್ಬತ್ ಮಾತ್ರ ಅಮರವಾಯಿತು.

"ಪ್ರೇಮ " ಪತ್ರ : ಹೇಳಲಾಗದ ಪ್ರೀತಿಯ ಪತ್ರ

ಸ್ನೇಹಿತರೇ ಪ್ರೇಮ ಮತ್ತು  ರಮ್ಯಳ ಪ್ರೇಮದ ವಿಷಯ ನಿಮಗೆ ಗೊತ್ತಿರುವಂತೆ ಒಂದು ಹಂತಕ್ಕೆ ಬಂದು ನಿಂತಿದೆ. ಮದುವೆಯಾಗಿರುವ ರಮ್ಯಳನ್ನು ಪ್ರೀತಿಸುವುದು ತಪ್ಪು ಎಂದು ಗೊತ್ತಿದ್ದರೂ ಸಹ ಪ್ರೇಮ ಮಾತ್ರ ತನ್ನ ಪ್ರೇಮಕ್ಕೆ ಯಾವುದೇ ಕಪ್ಪು ಚುಕ್ಕಯಾಗದಂತೆ ನೋಡಿಕೊಂಡಿದ್ದಾನೆ. ಅವಳು ಸಹ ತಮ್ಮ ಸ್ನೇಹಕ್ಕೆ ಬೆಲೆ ನೀಡಿ ಪ್ರೇಮವನ್ನು ಹಿಡಿದಿಟ್ಟಿಕೊಂಡಿದ್ದಳು. ಆದರೆ ಈಗ ಅವಳೇ ಅವನ ಬಾಯಿ ಬಿಡಿಸುವ ಮೂಲಕ ಅವನು ಕಣ್ಣಿರಿಡುವಂತೆ ಮಾಡಿದ್ದಾಳೆ. ಇತ್ತ ಪ್ರೇಮ ತಾನು ಪ್ರೀತಿಸಿದ ಹುಡುಗಿ ನೀನೆ ಎಂದು ಹೇಳುವ ಮೂಲಕ ಅವಳಿಗೆ ತನ್ನ ಪ್ರೀತಿಯನ್ನು ವಿವರಿಸಿದ್ದಾನೆ. ಆದರೆ ಅವನಲ್ಲಿ ಈಗ ಒಂದು ರೀತಿಯ ಗೀಲ್ಟ ಕಾಡಲು ಆರಂಭಿಸಿದೆ.  

ಇದು ಒತ್ತಟ್ಟಿಗಿರಲಿ ಸ್ನೇಹಿತರೇ, ಈಗ  ಒಂದು ವಿಷಯ ಹೇಳಲೇಬೇಕು ಅದೇನಪ್ಪ ಅಂದ್ರೆ, ಪ್ರೇಮ ನೂ ಕೂಡಾ ತನ್ನ ಹುಡುಗಿಗೆ ಅವಳ ಮದುವೆಗೆ ಮುಂಚೆ ಒಂದು ಪ್ರೇಮ ಪತ್ರ ಬರೆದಿದ್ದ.  

" ಹಾಯ್ ಚಿನ್ನ, ಹೇಗಿದಿಯಾ, ಎಷ್ಟು ದಿನ ಆಯ್ತು ನಿನ್ನ ನೋಡಿ, ಆ ನಿನ್ನ ನಗು,  ಆ ನಿನ್ನ ಇಳಿಬಿಟ್ಟ ಕೂದಲೂ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶಾಂತತೆ, ಏನೇ ಆದರೂ ಯಾರಿಗೂ ಹೇಳದೇ ಏನನ್ನೂ ತೋರಿಸಿ ಕೋಡದೆ ಇರುವ  ನಿನ್ನ  ಈ ಮಾರ್ಗದರ್ಶಕ ವ್ಯಕ್ತಿತ್ವಕ್ಕೆ  ಕಣೇ ನಾನು ಸೋತು ಹೋಗಿದ್ದು,
ನಿನ್ನಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ. ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ. ಅಂದು ನಿನ್ನ ನೋಡಿದ ನಾನು ಇಂದಿನವರೆಗೂ ಆ ಮುಖವನ್ನು ಮರೆಯಲು ಸಾಧ್ಯವಾಗಿಲ್ಲ. ನಿನ್ನ ಪ್ರತಿಯೊಂದು ಮಾತು ಕ(ವಿ)ತೆ ಇಂದಿಗೂ ನನ್ನ ಕಿವಿಯಲ್ಲಿ ಹಾಗೇ ಇದೆ. ಎರಡು ವರ್ಷಗಳ ನಂತರ ಆದರೂ ನೀನು ನನ್ನ ಮರೆತಿಲ್ಲ. ಅದು ನನಗೆ ಎಷ್ಟು ಖುಷಿ ನೀಡಿದೆ ಗೊತ್ತಾ ಚಿನ್ನ. 
""ನೀನು ಬಂದ ಮೇಲೆ ಮೇಲೆ ತಾನೇ ಇಷ್ಟೂ ಚಂದ  ಈ ಬಾಳು
ನೀನೇ ತಾನೆ ಹೇಳೆ ಕೋಟ್ಟೆ ಪ್ರೀತಿಸಲು'' 
ನಿಜವಾಗ್ಲು ನಿನು ಮರಳಿ ಪೋನ ಮಾಡಿದ ದಿನಾ ನಾನು ರಾತ್ರಿಯಲ್ಲ ನಿದ್ದೆನೇ ಮಾಡ್ಲಿಲ್ಲ. ಯಾಕೇ ಗೊತ್ತಾ ನಿನ್ನ ಸ್ನೇಹನೇ ಅಂತದ್ದೂ, ಆದರೆ ಮುಂದೆ ನೀನು ಯಾರನ್ನೋ ಪ್ರೀತಿಸ್ತೀನಿ ಅಂತ ಹೇಳಿದಾಗ ಆದ ಗಾಯ  ಇನ್ನೂ ಆರಿಲ್ಲ.  ಈಗಲೂ ಕಾಲ ಮಿಂಚಿಲ್ಲ ಚಿನ್ನು ನಾನು ನಿನ್ನ ತುಂಬ ಪ್ರೀತಿಸ್ತೀನಿ. ಎಷ್ಟೋ ಬಾರಿ ನಿನ್ನ ಹತ್ರ ಹೇಳಬೇಕು ಅಂದ್ಕೋಂಡೆ ಆದ್ರೆ ಹೇಳಕೋ ಆಗ್ಲಿಲ್ಲ.  ಬೇರೆಯಾರನ್ನೋ ಮದುವೆ ಮಾಡ್ಕೊಂಡು ಬಾಳೋದಕ್ಕಿನ ನಿನ್ನ ಮದುವೆಯಾದ್ರೆ ಉತ್ತಮ ಅಂತ ನನ್ನ ಅಭಿಪ್ರಾಯ. ನಿನ್ನ ಅಭಿಪ್ರಾಯನಾ ಬೇಗ ತಿಳಿಸು

""ಮಿಂಚಾಗಿ ನೀನು ಬರಲು ನಿಂತಲಿಯೇ ಮಳೆಗಾಲ
ಬೆಚ್ಚಗೆ ನೀ ಜತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನಲ್ಲೇ ನನಗೆ ಉಳಿಗಾಲ..  

ವಿರಹದ ಬೇಗೆಯಲ್ಲಿ ಬೇಯುತ್ತಿರುವ ನನ್ನಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರೀತಿಯ ಮಹಲ್ ಕಟ್ಟುತ್ತಿಯೋ ಅಥವಾ ನಿರಾಕರಿಸಿ ನಮ್ಮ ಪ್ರೀತಿಗೆ ಗೋರಿ ಕಟ್ಟುತ್ತಿಯೋ ನಿನಗೆ ಬಿಟ್ಟಿದ್ದು..

( ಓದುಗರೆ ಈ ಪ್ರೀತಿ ಹೇಗ ಮುಂದುವರಿತು ರಮ್ಯಳಾ ಮದುವೆ ಮುಂಚೆ ಅವರ ಸ್ನೇಹ ಹೇಗಿತ್ತು ಎನ್ನುವ ಇನ್ನೂ ಕೆಲವು ಕೂತುಹಲಕಾರಿ ಘಟನೆಯೊಂದಿಗೆ ಮತ್ತೆ ಬೇಟಿಯಾಗೋಣ) 




Sunday, December 22, 2013

ಒಂದು ಸಣ್ಣ ಪ್ರೇಮ ಕಥೆ

ಅದೊಂದು ಊರು ಅಲ್ಲಿನ ಒಂದು ಹುಡುಗ (ಕಥಾ ನಾಯಕ ಪ್ರೇಮ) ನಿಗೂ ದೂರದ ಊರಿನ ಹುಡುಗಿ( ಕಥಾ ನಾಯಕಿ ರಮ್ಯ)ಗೂ ಪರಿಚಯ ಆಯ್ತು. ಆದರೆ ನಂತರದ ದಿನಗಳಲ್ಲಿ ಆ ಹುಡುಗ ಆ ಹುಡುಗಿ ಭೇಟಿ ಆಗಿರಲಿಲ್ಲ. ಆದರೆ ಸುಮಾರು ವರ್ಷಗಳ ನಂತರ  ಒಂದು ಮದುವೆ ಇವರಿಬ್ಬರ ಅನನ್ಯ ಸ್ನೇಹಕ್ಕೆ ವೇದಿಕ ಆಗುತ್ತೆ. ಅಲ್ಲಿಂದ ಮುಂದೆ ಗಾಡವಾಗುತ್ತಾ ಬಂದ ಸ್ನೇಹ ಯಾವತ್ತೂ ಹಳಿ ತಪ್ಪಲಿಲ್ಲ   ಎಲ್ಲೇ ಮೀರಲಿಲ್ಲ.  ಆ ವೇಳೆಗೆ ಆಗಲೇ ರಮ್ಯಾ ತಾನು  ಒಂದು ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ನನಗೆ ನೀನು ನನಗೆ ಸಹಾಯ ಮಾಡಬೇಕೆಂದು ಆ ಪ್ರೇಮನಲ್ಲಿ ಕೇಳ್ತಾಳೆ. ಆಯ್ತು ಎಂದ ಪ್ರೇಮ ಅವಳೆಡೆಗೆ ಧಾವಿಸುತ್ತಾನೆ. ಆದರೆ ಆ ವೇಳೆಗಾಗಲೇ ಇದನ್ನು ಅರಿತಿದ್ದ ರಮ್ಯಾಳ ತಂದೆ ಅವಳನ್ನು ಕಲಿಕೆಯನ್ನು ಬಿಡಿಸಿ ರಾಜಧಾನಿಯಿಂದ ಮನೆಯಲ್ಲಿ  ಇಟ್ಟುಕೊಂಡಿರುತ್ತಾನೆ.  ಇದನ್ನು ಕಂಡ ಕಥಾ ನಾಯಕ ಪ್ರೇಮ ಬಹಳಷ್ಟು ನೊಂದುಕೊಳ್ಳುತ್ತಾನೆ.

ಎರಡು ವರ್ಷಗಳ ನಂತರ :  ಇದೆನಪ್ಪಾ ಧೀಡಿರ ಅಂತ ಎರಡು ವರ್ಷಾ ಆಯ್ತಾ ಅಂತ ಹುಬ್ಬೇರಿಸಬೇಡಿ. ಕಾರಣ ಈ ಎರಡು ವರ್ಷ  ಪ್ರೇಮನಿಗೂ ಹಾಗೂ ರಮ್ಯಳಿಗೂ ಯಾವುದೇ ರೀತಿಯ ಸಂವಹನ ನಡೆದಿರುವುದಿಲ್ಲ. ಕಾರಣ ಅವಳು ಏನನ್ನೋ ಸಾಧಿಸುವ ನಿಟ್ಟಿನಲ್ಲಿ ಹಾಗೂ  ಪ್ರೇಮ ಸಹ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಿರ್ತಾರೆ.  ಎರಡು ವರ್ಷಗಳ ನಂತರ ಆಕೆಗೆ ತನ್ನ ಆತ್ಮೀಯ ಸ್ನೇಹಿತನ ನೆನಪಾಗುತ್ತೆ.  ಅವಳು ಒಂದು ದಿನ ಅನುಮಾನದಿಂದಲೇ ಅವನ ಹಳೇ ನಂಬರಿಗೆ ಪೋನ್ ಮಾಡ್ತಾಳೆ. ಅವನು ಯಾರದೋ ನಂಬರ  ಎಂದು ಸುಮ್ಮನಾಗುತ್ತಾನೆ. ಆಗ ಅವನಿಗೆ ಸಂದೇಶವೊಂದು ಬರುತ್ತೇ. ನಾನು ರಮ್ಯ ಕಣೋ ಹೇಗಿದಿಯಾ. ನಾನು ನಿನ್ನ ಜತೆ ಮಾತಡಬೇಕು ಅಂತಾಳೆ. ಆಗ ಅವನು ಆಯ್ತು ಆದ್ರೆ ಈಗ ಬೇಡ ರಾತ್ರಿ 12 ಮೇಲೆ ಮಾಡು ಅಂತಾನೆ.
5 ಗಂಟೆಗಳ ಕಾಲ ಸುಧಿರ್ಘ ಮಾತು : ಎರಡು ವರ್ಷಗಳ ನಂತರ ಮಾತಿಗಿಳಿದ ರಮ್ಯ ಬರೋಬ್ಬರಿ 2.30 ಗಂಟೆಗೂ ಹೆಚ್ಚು ಕಾಲ ಮಾತಾಡ್ತಾಳೆ. ಆಗ ಕರೆನ್ಸಿ ಖಾಲಿ ಆಗುತ್ತೇ. ಮತ್ತೆ ಈತ ಅವಳಿಗೆ ಪೋನ್ ಮಾಡ್ತಾನೆ. ಅವನಿಗೋ ಖುಷಿಯೋ ಖುಷಿ ಕಾರಣ ಅವಳು ಎಂದರೆ ಅದೇನೋ ಅವನಿಗೆ ತುಂಬ  ಇಷ್ಟ. ಇಲ್ಲಿನ ಸ್ನೇಹಕ್ಕೆ ಯಾವುದೇ ರೀತಿಯ ಬಣ್ಣವಿರಲಿಲ್ಲ ಅದೊಂದು ಸುಂದರ ಅನುಬಂಧವಷ್ಟೇ. ಹೀಗೆ ಬೆಳಗಿನವರೆಗೂ ಎರಡು ವರ್ಷಗಳ ಮಾತಿನ ಬರ ನೀಗಿಸಿಕೊಂಡು ಸ್ನೇಹಿತರು ಮತ್ತೆ ಹಳೆಯ ದಿನಗಳಂತೆ ಒಂದಾಗಿರುತ್ತಾರೆ.
ಮತ್ತೆ ರಮ್ಯಳ ಪ್ರೇಮಾಯಣ : ಈ ನಡುವೆ ತನ್ನ ಊರಿನ ಪ್ರಸಿದ್ದ ಜಾತ್ರೆಗೆ ಸ್ನೇಹಿತನನ್ನು ಕರೆಸಿಕೊಳ್ಳುವ ರಮ್ಯ ಅವನೊಂದಿಗೆ ಹಾಗೂ ಇತರೇ ಸ್ನೇಹಿತರೊಂದಿಗೆ ಮೂರು ದಿನ ಅಲ್ಲಿ ಇಲ್ಲಿ ಸುತ್ತಾಡುತ್ತಾಳೆ.   ಜಾತ್ರೆ ಮುಗಿದು ಪ್ರೇಮ ತನ್ನ ಸ್ವಂತ  ಊರಿಗೆ ಬಂದಿದ್ದೇ ತಡ ಅವನ ಜತೆ ಮಾತಿಗಿಳಿದ ರಮ್ಯ ನಾನು ನನ್ನ ಅತ್ತೆ ಮಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸುತ್ತಾಳೆ. ಇದನ್ನು ಅರಿತ  ಪ್ರೇಮ ಮದುವೆಗೆ ಏನು ಸಮಸ್ಯೆ ಎಂದು ಕೇಳುತ್ತಾನೆ. ಆಗ ರಮ್ಯ ಮೊದಲು ನನ್ನನ್ನು ಪ್ರೀತಿಸುತ್ತೀದ್ದ ನನ್ನ ಅತ್ತೆ ಮಗ ನಾನು ಆಡಿದ ಒಂದು ಮಾತಿನಿಂದ ಬೇಸರಗೊಂಡು ನನ್ನನ್ನು ದೂರ ಮಾಡಿದ್ದು ನನಗೆ ದಿಕ್ಕು ತೋಚದಂತಾಗಿದೆ ಹೇಗಾದರೂ ಮಾಡಿ ಅವನ ಮನವೊಲಿಸಬೇಕಿದೆ ಎಂದು ಹೇಳುತ್ತಾಳೆ. ಆಯಿತು ಎಂದ ಪ್ರೇಮ ತನಗೆ ಗೋತ್ತಿರುವ ಜ್ಯೋತಿಷಿಗಳು ಹಾಗೂ ವಿದ್ವಾಂಸರ ಬಳಿ ಇಬ್ಬರ ಪೋಟೋಗಳನ್ನು ಹಾಗೂ ಜಾತಕಗಳನ್ನು ತೋರಿಸಿ ಇವರ ಮದುವೆಯಾಗುವಂತೆ ಮಾಡಿ ಎಂದು ಬೇಡುತ್ತಾನೆ. ಜತೆಗೆ ತನಗೆ ನಂಬಿಕೆಯಿದ್ದ ದೇವರಲ್ಲಿ ಪ್ರಾರ್ಥಿಸಿ ಅವರು ಒಂದಾಗುವಂತೆ ಮಾಡಿ ಎಂದು ಬೇಡಿಕೊಳ್ಳುತ್ತಾನೆ.
ಆದರೆ ಪಟ್ಟು ಸಡಿಲಿಸದ ರಮ್ಯಾಳ ಅತ್ತೆ ಮಗ ಅವಳನ್ನು ಮದುವೆಯಾಗಲಾರೆ ಎಂದು ಹೇಳುತ್ತಾನೆ. ಇದರಿಂದ ಜರ್ಜಿತಳಾದ ರಮ್ಯಳನ್ನು ಸಂತೈಸಿದ ಪ್ರೇಮ ಅವಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾನೆ. ಈ ನಡುವೆ ಅವನಿಗೆ ಗೊತ್ತಿಲ್ಲದಂತೆ ರಮ್ಯಳನ್ನು ಪ್ರೀತಿಸ ತೊಡಗುವ ಪ್ರೇಮ ಆ ವಿಷಯವನ್ನು ಅವಳಿಗೆ ತಿಳಿಸುವುದಿಲ್ಲ ಕಾರಣ ಅವಳು ಒಪ್ಪದಿದ್ದರೇ ಎನ್ನುವ ಭಯ ಅವನಿಗೆ.
ಅನಟೋಲ್ಡ ಲವ್ : ನಿಜಕ್ಕೂ ಈ ಪ್ರೇಮ ಕಥೆ ಶುರುವಾಗುವುದೇ ಇಲ್ಲಿ. ಪ್ರೇಮನ ಮಾತು, ಕೃತಿ, ಅವನ ನೀಡಿದ ಬೆಂಬಲದಿಂದ ಪ್ರಭಾವಿತಳಾದ ರಮ್ಯ ಸಹ ಅವನನ್ನು ಪ್ರೀತಿಸತೊಡಗುತ್ತಾಳೆ. ಆದರೆ ಅವಳು ಸಹ  ಬಾಯಿ ಬಿಡುವುದಿಲ್ಲ. ಹೀಗೆ ದಿನ ಕಳೆದಂತೆ ಮನೆಯಲ್ಲಿ ರಮ್ಯಳಿಗೆ ಬೇರೆ ಕಡೆ ಗಂಡು ನೋಡಲು ಪ್ರಾರಂಭಿಸುತ್ತಾರೆ. ಈ ವಿಷಯ ಪ್ರೇಮನಿಗೂ ಗೊತ್ತಾಗುತ್ತದೆ ಆಗಲೂ ಸಹ ಅವನು ಬಾಯಿ ಬಿಡುವುದಿಲ್ಲ. ಕಾರಣ ಮತ್ತೇ ಅದೇ ಅವಳು ದೂರವಾದರೆ, ಅವಳು ಸಹ ಅವನಲ್ಲಿ ಈ ವಿಷಯ ಹೇಳುವುದಿಲ್ಲ. ದಿನಗಳು ಹೀಗೆ ಸಾಗಿರುವಾಗ ಒಂದು ಹುಡುಗನ ಪೋಟೋವನ್ನು ಹಾಗೂ ಜಾತಕವನ್ನು ಪ್ರೇಮನಿಗೆ ಮೇಲ್ ಮಾಡುವ ರಮ್ಯ  ಇವನನ್ನು ನಮ್ಮ ಮನೆಯವರೆಲ್ಲರೂ ಒಪ್ಪಿದ್ದು ನೀನು ಒಪ್ಪಿಗೆ ಸೂಚಿಸಿದರೆ ಹಾಗೂ ನನ್ನ ಜಾತಕದ ಜತೆ ಹೊಂದಾಣಿಕೆ ಯಾಗುತ್ತದೆ ಎಂದರೆ ನಾನು ಮದುವೆಯಾಗಲು ಸಿದ್ಧ ಎಂದು ತಿಳಿಸುತ್ತಾಳೆ. ಇದರಿಂದ ಬಹುವಾಗಿ ನೊಂದುಕೊಂಡ ಪ್ರೇಮ ಆಯಿತು ಎಂದು ತನ್ನ ಸ್ನೇಹಕ್ಕಾಗಿ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ.
 ಮುಂದೆ ಮದುವೆಗೆ ಆಮಂತ್ರಣ ಬಂದಾಗ ಹೃದಯ ಚೂರಾದರೂ ಅವಳ ಸಂತಸದಲ್ಲಿ ತನ್ನನ್ನು ತಾನು ಸಂತೈಸಿಕೊಂಡ ಪ್ರೇಮ ಮದುವೆಗೆ ಹೋಗಿ ವಧುವರರಿಗೆ ಶುಭ ಕೋರುತ್ತಾನೆ. ಮದುವೆಯಾಗಿ ಸುಮಾರು ತಿಂಗಳು ಕಳೆದ ಮೇಲೇ ಏಕಾಏಕಿ ಪೋನ್ ಮಾಡುವ ರಮ್ಯ ಗಳಗಳನೇ ಅಳಲು ಶುರು ಮಾಡುತ್ತಾಳೆ. ಆಗ ಪ್ರೇಮ ಕಾರಣವೆನೆಂದು ಕೇಳಲು ಗಂಡ ವಿನಾಕಾರಣ ಅನುಮಾನ ಪಡುತ್ತಿದ್ದು ನನಗೆ ಜೀವನವೇ ಬೇಸರವಾಗಿದೆ ಎಂದು ದುಖಃ ಹಂಚಿಕೊಳ್ಳುತ್ತಾಳೆ.ಆಗ ಮತ್ತೆ ಅವಳಿಗೆ ಸಾಂತ್ವಾನ ನೀಡಿದ ಪ್ರೇಮ, ಗೊತ್ತಿರುವ ಜ್ಯೋತಿಷಿಗಳು ಹಾಗೂ ದೇವರ ಮೊರೆ ಹೋಗಿ ಅವರಿಬ್ಬರು ಚನ್ನಾಗಿರಲಿ ಎಂದು ಬೇಡಿಕೊಳ್ಳುತ್ತಾನೆ.
ಮಗುವಿನ ಸಂಭ್ರಮ : ನಂತರ ಗಂಡ ಹೆಂಡತಿಯ ನಡುವೆ ಇದ್ದ ಕಂದಕ ಮುಚ್ಚಿ ರಮ್ಯ ತಾಯಿಯಾಗತ್ತಾಳೆ. ಆಗಲೂ ಸಹ ತನ್ನ ಸ್ನೇಹವೇ ದೊಡ್ಡದು ಎಂದು ತಿಳಿದು ಪ್ರೇಮ ಮಗುವನ್ನು ಕಂಡು ಅದಕ್ಕೆ ಮುತ್ತಿಟ್ಟು ಬರುತ್ತಾನೆ. ಈ ನಡುವೆ ಅವನಿಗೆ ಜೀವನ ಬೇಸರವೆನಿಸ ತೊಡಗುತ್ತದೆ. ಜೀವನದಲ್ಲಿ ಕೆಲ ಕಹಿ ಘಟನೆಗಳು ಅವನನ್ನು ಆಧ್ಯಾತ್ಮದೆಡೆಗೆ ಒಯ್ಯಲಾರಂಭಿಸುತ್ತವೆ. ಸಣ್ಣ ಹುಡುಗನಿದ್ದಾನಿಂದಲೂ ಆಧ್ಯಾತ್ಮದ ಬಗ್ಗೆ ಅಪಾರ  ಒಲವಿದ್ದ ಪ್ರೇಮ  ಈ ವಿಷಯವನ್ನು ಅವಳಿಗೆ ತಿಳಿಸುತ್ತಾನೆ. ಅದಕ್ಕೆ ಅವಳಿಂದ ಯಾವುದೇ ಬಗೆಯ ಪ್ರತಿ ಉತ್ತರ ಬರುವುದಿಲ್ಲ. ಹೀಗೆ ಒಂದು ದಿನ ಸಂದೇಶ ವನಿಮಯ ಸಮಯದಲ್ಲಿ ರಮ್ಯ ಇವನ ಮದುವೆ ಬಗ್ಗೆ ಕೇಳುತ್ತಾಳೆ. ಆಗ ಅವನು ತಾನು ಒಂದು ಹುಡುಗಿಯನ್ನು ಪ್ರೀತಿಸಿದ್ದು ಅವಳಿಗೆ ಹೇಳಲಾಗಲಿಲ್ಲ. ಆದರೆ ಅವಳನ್ನು ಈಗಲೂ ತಾನು ಪ್ರೀತಿಸುತ್ತೀರುವುದಾಗಿಯೂ ಅವಳಿಗೆ ಮದುವೆಯಾಗಿ ಗೃಹಿಣಿಯಾಗಿದ್ದಾಳೆ ಎಂದು ತಿಳಿಸುತ್ತಾನೆ. ಕೆಲ ದಿನಗಳ ನಂತರ ಮತ್ತೆ ಸಂದೇಶ ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೆ ಆ ವಿಷಯ ಪ್ರಸ್ತಾಪವಾಗಿ ನೀನು ಪ್ರೀತಿಸಿದ ಹುಡುಗಿ ನಾನೇ...!  ನಾನು ಸಹ ನಿನ್ನನ್ನು ಪ್ರೀತಿಸಿದ್ದು, ನೀನು ನನ್ನನ್ನು ಪ್ರೀತಿಸುತ್ತಿದ್ದ ವಿಷಯ ತನಗೆ ಗೊತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ದೂರವಾಗಿದ್ದೇವೆ ನಾನು ಏನು ಮಾಡುವ ಸ್ಥೀತಿಯಲ್ಲಿ ಇಲ್ಲ.  ಎಂದು ಕೈ ಚೆಲ್ಲುತ್ತಾಳೆ.
ಹೀಗೆ ಮದುವೆಯಾಗಿರುವ ರಮ್ಯ ಹಾಗೂ  ಪ್ರೇಮ ನಡುವಿನ ಪ್ರೀತಿ ಮುಂದೇನಾಯ್ತ ಎನ್ನುವುದನ್ನು ಮುಂದಿನ ಬರಹದಲ್ಲಿ ತಿಳಿಸುತ್ತೇನೆ...

ಇಂತಿ ನಿಮ್ಮ 
ಪ್ರಶಾಂತ  ರಾಜ ರಾಜ ಗುರು...!