Sunday, December 22, 2013

ಒಂದು ಸಣ್ಣ ಪ್ರೇಮ ಕಥೆ

ಅದೊಂದು ಊರು ಅಲ್ಲಿನ ಒಂದು ಹುಡುಗ (ಕಥಾ ನಾಯಕ ಪ್ರೇಮ) ನಿಗೂ ದೂರದ ಊರಿನ ಹುಡುಗಿ( ಕಥಾ ನಾಯಕಿ ರಮ್ಯ)ಗೂ ಪರಿಚಯ ಆಯ್ತು. ಆದರೆ ನಂತರದ ದಿನಗಳಲ್ಲಿ ಆ ಹುಡುಗ ಆ ಹುಡುಗಿ ಭೇಟಿ ಆಗಿರಲಿಲ್ಲ. ಆದರೆ ಸುಮಾರು ವರ್ಷಗಳ ನಂತರ  ಒಂದು ಮದುವೆ ಇವರಿಬ್ಬರ ಅನನ್ಯ ಸ್ನೇಹಕ್ಕೆ ವೇದಿಕ ಆಗುತ್ತೆ. ಅಲ್ಲಿಂದ ಮುಂದೆ ಗಾಡವಾಗುತ್ತಾ ಬಂದ ಸ್ನೇಹ ಯಾವತ್ತೂ ಹಳಿ ತಪ್ಪಲಿಲ್ಲ   ಎಲ್ಲೇ ಮೀರಲಿಲ್ಲ.  ಆ ವೇಳೆಗೆ ಆಗಲೇ ರಮ್ಯಾ ತಾನು  ಒಂದು ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ನನಗೆ ನೀನು ನನಗೆ ಸಹಾಯ ಮಾಡಬೇಕೆಂದು ಆ ಪ್ರೇಮನಲ್ಲಿ ಕೇಳ್ತಾಳೆ. ಆಯ್ತು ಎಂದ ಪ್ರೇಮ ಅವಳೆಡೆಗೆ ಧಾವಿಸುತ್ತಾನೆ. ಆದರೆ ಆ ವೇಳೆಗಾಗಲೇ ಇದನ್ನು ಅರಿತಿದ್ದ ರಮ್ಯಾಳ ತಂದೆ ಅವಳನ್ನು ಕಲಿಕೆಯನ್ನು ಬಿಡಿಸಿ ರಾಜಧಾನಿಯಿಂದ ಮನೆಯಲ್ಲಿ  ಇಟ್ಟುಕೊಂಡಿರುತ್ತಾನೆ.  ಇದನ್ನು ಕಂಡ ಕಥಾ ನಾಯಕ ಪ್ರೇಮ ಬಹಳಷ್ಟು ನೊಂದುಕೊಳ್ಳುತ್ತಾನೆ.

ಎರಡು ವರ್ಷಗಳ ನಂತರ :  ಇದೆನಪ್ಪಾ ಧೀಡಿರ ಅಂತ ಎರಡು ವರ್ಷಾ ಆಯ್ತಾ ಅಂತ ಹುಬ್ಬೇರಿಸಬೇಡಿ. ಕಾರಣ ಈ ಎರಡು ವರ್ಷ  ಪ್ರೇಮನಿಗೂ ಹಾಗೂ ರಮ್ಯಳಿಗೂ ಯಾವುದೇ ರೀತಿಯ ಸಂವಹನ ನಡೆದಿರುವುದಿಲ್ಲ. ಕಾರಣ ಅವಳು ಏನನ್ನೋ ಸಾಧಿಸುವ ನಿಟ್ಟಿನಲ್ಲಿ ಹಾಗೂ  ಪ್ರೇಮ ಸಹ ಸಾಧಿಸುವ ನಿಟ್ಟಿನಲ್ಲಿ ಮುನ್ನಡೆದಿರ್ತಾರೆ.  ಎರಡು ವರ್ಷಗಳ ನಂತರ ಆಕೆಗೆ ತನ್ನ ಆತ್ಮೀಯ ಸ್ನೇಹಿತನ ನೆನಪಾಗುತ್ತೆ.  ಅವಳು ಒಂದು ದಿನ ಅನುಮಾನದಿಂದಲೇ ಅವನ ಹಳೇ ನಂಬರಿಗೆ ಪೋನ್ ಮಾಡ್ತಾಳೆ. ಅವನು ಯಾರದೋ ನಂಬರ  ಎಂದು ಸುಮ್ಮನಾಗುತ್ತಾನೆ. ಆಗ ಅವನಿಗೆ ಸಂದೇಶವೊಂದು ಬರುತ್ತೇ. ನಾನು ರಮ್ಯ ಕಣೋ ಹೇಗಿದಿಯಾ. ನಾನು ನಿನ್ನ ಜತೆ ಮಾತಡಬೇಕು ಅಂತಾಳೆ. ಆಗ ಅವನು ಆಯ್ತು ಆದ್ರೆ ಈಗ ಬೇಡ ರಾತ್ರಿ 12 ಮೇಲೆ ಮಾಡು ಅಂತಾನೆ.
5 ಗಂಟೆಗಳ ಕಾಲ ಸುಧಿರ್ಘ ಮಾತು : ಎರಡು ವರ್ಷಗಳ ನಂತರ ಮಾತಿಗಿಳಿದ ರಮ್ಯ ಬರೋಬ್ಬರಿ 2.30 ಗಂಟೆಗೂ ಹೆಚ್ಚು ಕಾಲ ಮಾತಾಡ್ತಾಳೆ. ಆಗ ಕರೆನ್ಸಿ ಖಾಲಿ ಆಗುತ್ತೇ. ಮತ್ತೆ ಈತ ಅವಳಿಗೆ ಪೋನ್ ಮಾಡ್ತಾನೆ. ಅವನಿಗೋ ಖುಷಿಯೋ ಖುಷಿ ಕಾರಣ ಅವಳು ಎಂದರೆ ಅದೇನೋ ಅವನಿಗೆ ತುಂಬ  ಇಷ್ಟ. ಇಲ್ಲಿನ ಸ್ನೇಹಕ್ಕೆ ಯಾವುದೇ ರೀತಿಯ ಬಣ್ಣವಿರಲಿಲ್ಲ ಅದೊಂದು ಸುಂದರ ಅನುಬಂಧವಷ್ಟೇ. ಹೀಗೆ ಬೆಳಗಿನವರೆಗೂ ಎರಡು ವರ್ಷಗಳ ಮಾತಿನ ಬರ ನೀಗಿಸಿಕೊಂಡು ಸ್ನೇಹಿತರು ಮತ್ತೆ ಹಳೆಯ ದಿನಗಳಂತೆ ಒಂದಾಗಿರುತ್ತಾರೆ.
ಮತ್ತೆ ರಮ್ಯಳ ಪ್ರೇಮಾಯಣ : ಈ ನಡುವೆ ತನ್ನ ಊರಿನ ಪ್ರಸಿದ್ದ ಜಾತ್ರೆಗೆ ಸ್ನೇಹಿತನನ್ನು ಕರೆಸಿಕೊಳ್ಳುವ ರಮ್ಯ ಅವನೊಂದಿಗೆ ಹಾಗೂ ಇತರೇ ಸ್ನೇಹಿತರೊಂದಿಗೆ ಮೂರು ದಿನ ಅಲ್ಲಿ ಇಲ್ಲಿ ಸುತ್ತಾಡುತ್ತಾಳೆ.   ಜಾತ್ರೆ ಮುಗಿದು ಪ್ರೇಮ ತನ್ನ ಸ್ವಂತ  ಊರಿಗೆ ಬಂದಿದ್ದೇ ತಡ ಅವನ ಜತೆ ಮಾತಿಗಿಳಿದ ರಮ್ಯ ನಾನು ನನ್ನ ಅತ್ತೆ ಮಗನನ್ನು ಪ್ರೀತಿಸುತ್ತಿರುವುದಾಗಿ ತಿಳಿಸುತ್ತಾಳೆ. ಇದನ್ನು ಅರಿತ  ಪ್ರೇಮ ಮದುವೆಗೆ ಏನು ಸಮಸ್ಯೆ ಎಂದು ಕೇಳುತ್ತಾನೆ. ಆಗ ರಮ್ಯ ಮೊದಲು ನನ್ನನ್ನು ಪ್ರೀತಿಸುತ್ತೀದ್ದ ನನ್ನ ಅತ್ತೆ ಮಗ ನಾನು ಆಡಿದ ಒಂದು ಮಾತಿನಿಂದ ಬೇಸರಗೊಂಡು ನನ್ನನ್ನು ದೂರ ಮಾಡಿದ್ದು ನನಗೆ ದಿಕ್ಕು ತೋಚದಂತಾಗಿದೆ ಹೇಗಾದರೂ ಮಾಡಿ ಅವನ ಮನವೊಲಿಸಬೇಕಿದೆ ಎಂದು ಹೇಳುತ್ತಾಳೆ. ಆಯಿತು ಎಂದ ಪ್ರೇಮ ತನಗೆ ಗೋತ್ತಿರುವ ಜ್ಯೋತಿಷಿಗಳು ಹಾಗೂ ವಿದ್ವಾಂಸರ ಬಳಿ ಇಬ್ಬರ ಪೋಟೋಗಳನ್ನು ಹಾಗೂ ಜಾತಕಗಳನ್ನು ತೋರಿಸಿ ಇವರ ಮದುವೆಯಾಗುವಂತೆ ಮಾಡಿ ಎಂದು ಬೇಡುತ್ತಾನೆ. ಜತೆಗೆ ತನಗೆ ನಂಬಿಕೆಯಿದ್ದ ದೇವರಲ್ಲಿ ಪ್ರಾರ್ಥಿಸಿ ಅವರು ಒಂದಾಗುವಂತೆ ಮಾಡಿ ಎಂದು ಬೇಡಿಕೊಳ್ಳುತ್ತಾನೆ.
ಆದರೆ ಪಟ್ಟು ಸಡಿಲಿಸದ ರಮ್ಯಾಳ ಅತ್ತೆ ಮಗ ಅವಳನ್ನು ಮದುವೆಯಾಗಲಾರೆ ಎಂದು ಹೇಳುತ್ತಾನೆ. ಇದರಿಂದ ಜರ್ಜಿತಳಾದ ರಮ್ಯಳನ್ನು ಸಂತೈಸಿದ ಪ್ರೇಮ ಅವಳಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾನೆ. ಈ ನಡುವೆ ಅವನಿಗೆ ಗೊತ್ತಿಲ್ಲದಂತೆ ರಮ್ಯಳನ್ನು ಪ್ರೀತಿಸ ತೊಡಗುವ ಪ್ರೇಮ ಆ ವಿಷಯವನ್ನು ಅವಳಿಗೆ ತಿಳಿಸುವುದಿಲ್ಲ ಕಾರಣ ಅವಳು ಒಪ್ಪದಿದ್ದರೇ ಎನ್ನುವ ಭಯ ಅವನಿಗೆ.
ಅನಟೋಲ್ಡ ಲವ್ : ನಿಜಕ್ಕೂ ಈ ಪ್ರೇಮ ಕಥೆ ಶುರುವಾಗುವುದೇ ಇಲ್ಲಿ. ಪ್ರೇಮನ ಮಾತು, ಕೃತಿ, ಅವನ ನೀಡಿದ ಬೆಂಬಲದಿಂದ ಪ್ರಭಾವಿತಳಾದ ರಮ್ಯ ಸಹ ಅವನನ್ನು ಪ್ರೀತಿಸತೊಡಗುತ್ತಾಳೆ. ಆದರೆ ಅವಳು ಸಹ  ಬಾಯಿ ಬಿಡುವುದಿಲ್ಲ. ಹೀಗೆ ದಿನ ಕಳೆದಂತೆ ಮನೆಯಲ್ಲಿ ರಮ್ಯಳಿಗೆ ಬೇರೆ ಕಡೆ ಗಂಡು ನೋಡಲು ಪ್ರಾರಂಭಿಸುತ್ತಾರೆ. ಈ ವಿಷಯ ಪ್ರೇಮನಿಗೂ ಗೊತ್ತಾಗುತ್ತದೆ ಆಗಲೂ ಸಹ ಅವನು ಬಾಯಿ ಬಿಡುವುದಿಲ್ಲ. ಕಾರಣ ಮತ್ತೇ ಅದೇ ಅವಳು ದೂರವಾದರೆ, ಅವಳು ಸಹ ಅವನಲ್ಲಿ ಈ ವಿಷಯ ಹೇಳುವುದಿಲ್ಲ. ದಿನಗಳು ಹೀಗೆ ಸಾಗಿರುವಾಗ ಒಂದು ಹುಡುಗನ ಪೋಟೋವನ್ನು ಹಾಗೂ ಜಾತಕವನ್ನು ಪ್ರೇಮನಿಗೆ ಮೇಲ್ ಮಾಡುವ ರಮ್ಯ  ಇವನನ್ನು ನಮ್ಮ ಮನೆಯವರೆಲ್ಲರೂ ಒಪ್ಪಿದ್ದು ನೀನು ಒಪ್ಪಿಗೆ ಸೂಚಿಸಿದರೆ ಹಾಗೂ ನನ್ನ ಜಾತಕದ ಜತೆ ಹೊಂದಾಣಿಕೆ ಯಾಗುತ್ತದೆ ಎಂದರೆ ನಾನು ಮದುವೆಯಾಗಲು ಸಿದ್ಧ ಎಂದು ತಿಳಿಸುತ್ತಾಳೆ. ಇದರಿಂದ ಬಹುವಾಗಿ ನೊಂದುಕೊಂಡ ಪ್ರೇಮ ಆಯಿತು ಎಂದು ತನ್ನ ಸ್ನೇಹಕ್ಕಾಗಿ ಪ್ರೀತಿಯನ್ನು ಬಿಟ್ಟುಕೊಡಲು ಒಪ್ಪಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾನೆ.
 ಮುಂದೆ ಮದುವೆಗೆ ಆಮಂತ್ರಣ ಬಂದಾಗ ಹೃದಯ ಚೂರಾದರೂ ಅವಳ ಸಂತಸದಲ್ಲಿ ತನ್ನನ್ನು ತಾನು ಸಂತೈಸಿಕೊಂಡ ಪ್ರೇಮ ಮದುವೆಗೆ ಹೋಗಿ ವಧುವರರಿಗೆ ಶುಭ ಕೋರುತ್ತಾನೆ. ಮದುವೆಯಾಗಿ ಸುಮಾರು ತಿಂಗಳು ಕಳೆದ ಮೇಲೇ ಏಕಾಏಕಿ ಪೋನ್ ಮಾಡುವ ರಮ್ಯ ಗಳಗಳನೇ ಅಳಲು ಶುರು ಮಾಡುತ್ತಾಳೆ. ಆಗ ಪ್ರೇಮ ಕಾರಣವೆನೆಂದು ಕೇಳಲು ಗಂಡ ವಿನಾಕಾರಣ ಅನುಮಾನ ಪಡುತ್ತಿದ್ದು ನನಗೆ ಜೀವನವೇ ಬೇಸರವಾಗಿದೆ ಎಂದು ದುಖಃ ಹಂಚಿಕೊಳ್ಳುತ್ತಾಳೆ.ಆಗ ಮತ್ತೆ ಅವಳಿಗೆ ಸಾಂತ್ವಾನ ನೀಡಿದ ಪ್ರೇಮ, ಗೊತ್ತಿರುವ ಜ್ಯೋತಿಷಿಗಳು ಹಾಗೂ ದೇವರ ಮೊರೆ ಹೋಗಿ ಅವರಿಬ್ಬರು ಚನ್ನಾಗಿರಲಿ ಎಂದು ಬೇಡಿಕೊಳ್ಳುತ್ತಾನೆ.
ಮಗುವಿನ ಸಂಭ್ರಮ : ನಂತರ ಗಂಡ ಹೆಂಡತಿಯ ನಡುವೆ ಇದ್ದ ಕಂದಕ ಮುಚ್ಚಿ ರಮ್ಯ ತಾಯಿಯಾಗತ್ತಾಳೆ. ಆಗಲೂ ಸಹ ತನ್ನ ಸ್ನೇಹವೇ ದೊಡ್ಡದು ಎಂದು ತಿಳಿದು ಪ್ರೇಮ ಮಗುವನ್ನು ಕಂಡು ಅದಕ್ಕೆ ಮುತ್ತಿಟ್ಟು ಬರುತ್ತಾನೆ. ಈ ನಡುವೆ ಅವನಿಗೆ ಜೀವನ ಬೇಸರವೆನಿಸ ತೊಡಗುತ್ತದೆ. ಜೀವನದಲ್ಲಿ ಕೆಲ ಕಹಿ ಘಟನೆಗಳು ಅವನನ್ನು ಆಧ್ಯಾತ್ಮದೆಡೆಗೆ ಒಯ್ಯಲಾರಂಭಿಸುತ್ತವೆ. ಸಣ್ಣ ಹುಡುಗನಿದ್ದಾನಿಂದಲೂ ಆಧ್ಯಾತ್ಮದ ಬಗ್ಗೆ ಅಪಾರ  ಒಲವಿದ್ದ ಪ್ರೇಮ  ಈ ವಿಷಯವನ್ನು ಅವಳಿಗೆ ತಿಳಿಸುತ್ತಾನೆ. ಅದಕ್ಕೆ ಅವಳಿಂದ ಯಾವುದೇ ಬಗೆಯ ಪ್ರತಿ ಉತ್ತರ ಬರುವುದಿಲ್ಲ. ಹೀಗೆ ಒಂದು ದಿನ ಸಂದೇಶ ವನಿಮಯ ಸಮಯದಲ್ಲಿ ರಮ್ಯ ಇವನ ಮದುವೆ ಬಗ್ಗೆ ಕೇಳುತ್ತಾಳೆ. ಆಗ ಅವನು ತಾನು ಒಂದು ಹುಡುಗಿಯನ್ನು ಪ್ರೀತಿಸಿದ್ದು ಅವಳಿಗೆ ಹೇಳಲಾಗಲಿಲ್ಲ. ಆದರೆ ಅವಳನ್ನು ಈಗಲೂ ತಾನು ಪ್ರೀತಿಸುತ್ತೀರುವುದಾಗಿಯೂ ಅವಳಿಗೆ ಮದುವೆಯಾಗಿ ಗೃಹಿಣಿಯಾಗಿದ್ದಾಳೆ ಎಂದು ತಿಳಿಸುತ್ತಾನೆ. ಕೆಲ ದಿನಗಳ ನಂತರ ಮತ್ತೆ ಸಂದೇಶ ವಿನಿಮಯ ಮಾಡುತ್ತಿರುವ ಸಂದರ್ಭದಲ್ಲಿ ಮತ್ತೆ ಆ ವಿಷಯ ಪ್ರಸ್ತಾಪವಾಗಿ ನೀನು ಪ್ರೀತಿಸಿದ ಹುಡುಗಿ ನಾನೇ...!  ನಾನು ಸಹ ನಿನ್ನನ್ನು ಪ್ರೀತಿಸಿದ್ದು, ನೀನು ನನ್ನನ್ನು ಪ್ರೀತಿಸುತ್ತಿದ್ದ ವಿಷಯ ತನಗೆ ಗೊತ್ತಿದೆ. ಆದರೆ ಅನಿವಾರ್ಯ ಕಾರಣಗಳಿಂದಾಗಿ ದೂರವಾಗಿದ್ದೇವೆ ನಾನು ಏನು ಮಾಡುವ ಸ್ಥೀತಿಯಲ್ಲಿ ಇಲ್ಲ.  ಎಂದು ಕೈ ಚೆಲ್ಲುತ್ತಾಳೆ.
ಹೀಗೆ ಮದುವೆಯಾಗಿರುವ ರಮ್ಯ ಹಾಗೂ  ಪ್ರೇಮ ನಡುವಿನ ಪ್ರೀತಿ ಮುಂದೇನಾಯ್ತ ಎನ್ನುವುದನ್ನು ಮುಂದಿನ ಬರಹದಲ್ಲಿ ತಿಳಿಸುತ್ತೇನೆ...

ಇಂತಿ ನಿಮ್ಮ 
ಪ್ರಶಾಂತ  ರಾಜ ರಾಜ ಗುರು...!

1 comment: