ಟಿ ಆರ್ ಪಿ ನೇ ಮುಖ್ಯಾನಾ..?
ಕಳೆದ 15 ದಿನಗಳಿಂದ ಇಂಥದೊಂದು ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಕಾರಣ ಇಷ್ಟೇ ಸಮಾಜವನ್ನು ಸರಿದಾರಿಗೆ ತರಬೇಕಾದ ಅಥವಾ ಸರಿ ದಾರಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬೇಕಾದ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ
, ನಾನಾ ರೀತಿಯ ಕಸರತ್ತು ನಡೆಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.
ಉತ್ತಮ ಸಮಾಜಕ್ಕಾಗಿ, ನೇರ ದಿಟ್ಟ ನಿರಂತರ, ಪ್ರಾಮಾಣಿಕತೆ ಅದು ಇದು ಎಂದು ಟ್ಯಾಗ್ ಲೈನ್ ಎಳೆದುಕೊಂಡಿರುವ ದೃಶ್ಯ ಮಾಧ್ಯಮಗಳು ಇಂದು ನಿರಂತರವಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ.
ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಬೀಳಲೆ ಬೇಕಿದೆ.
ಕಡಿವಾಣ ಏಕೆ ?: ವಿವಿಧತೆಯಲ್ಲೂ ಏಕತೆ ಪ್ರದರ್ಶಿಸುತ್ತಿರುವ ನಮ್ಮ ದೇಶದಲ್ಲಿ ಅಭಿಪ್ರಾಯ ಬೇದಗಳು ಸಹಜವೇ. ಆದರೂ ಸಹ ಎಲ್ಲರೂ ಒಟ್ಟಾಗಿ ಬಾಳುತ್ತಿರುವುದು ಸಂತಸದ ಸಂಗತಿ. ಆದರೆ ಇಂದು ಸಮಾಜವನ್ನು ವೈಚಾರಿಕತೆಯನ್ನುವ ಹಣೆಪಟ್ಟಿಯಲ್ಲಿ ಮುನ್ನಡೆಸಲು ಹಾಗೂ ಭಾರತೀಯ ಸಂಸ್ಕೃತಿಯನ್ನು ಮುಗಿಸಲು ಕಾಯುತ್ತಿರುವ ಕೆಲವರು ವಿನಾಕಾರಣ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮೌಢ್ಯಗಳನ್ನು ತೊಡೆದು ಹಾಕುತ್ತೇವೆ ಎನ್ನುವ ಅವರುಗಳು ಪ್ರಚಾರಕ್ಕಾಗಿ ಮಾಧ್ಯಮದ ಮೊರೆ ಹೋಗಿದ್ದಾರೆ. ಇದನ್ನು ತಿಳಿಯದ ಮಾಧ್ಯಮಗಳು ಅವರಿಗೆ ಮಣೆ ಹಾಕುವ ಮೂಲಕ ಲಕ್ಷಾಂತರ ಆಸ್ತಿಕರಲ್ಲಿ ಗೊಂದಲವನ್ನುಂಟು ಮಾಡುತ್ತಿವೆ. ಇದರಿಂದಾಗಿ 2020 ಭಾರತ ಸುಪರ್ ಪವರ್ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವ ಅನೇಕರಿಗೆ ನೋವಾಗಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಶಕ್ತಿಯಾಗಿಸಬೇಕು ಎನ್ನುವ ವಿವೇಕರ ವಾಣಿಯನ್ನು ಹಾಗೂ ದಾರ್ಶನಿಕ ರ ಮಾತನ್ನು ಮರೆತು ತಮ್ಮ ಪ್ರತಿಷ್ಠೆಗೋಸ್ಕೃರ ಇನ್ನೊಬ್ಬರ ಆಸ್ತಿಕತೆ, ನಂಬಿಕೆಯ ಮೇಲೆ ಪ್ರಹಾರ ಮಾಡುತ್ತಿರುವ ಅವರುಗಳನ್ನು ಮಾಧ್ಯಮಗಳು ಸಹ ಬೆನ್ನು ತಟ್ಟುತ್ತಿರುವುದು ನೋವಿನ ಸಂಗತಿ.
ಭಾರತ ಆಧ್ಯಾತ್ಮತ ನೆಲವಾಗಿದ್ದು, ಇಲ್ಲಿ ಏಕ ಕಾಲಕ್ಕೆ ಎಲ್ಲವೂ ನಡೆದುಕೊಂಡು ಬರುತ್ತಿದೆ. ಒಂದೇಡೆ ವೈಚಾರಿಕತೆ ವಿಸ್ತರಿಸುತ್ತಿದ್ದರೆ ಇನ್ನೊಂದಡೆ ಆಧ್ಯಾತ್ಮಿಕತೆಯೂ ಸಹ ತಮ್ಮ ಮೂಲವನ್ನು ಕಾಪಾಡಿಕೊಳ್ಳುತ್ತಾ ಮನಸ್ಸಿಗೆ ಶಾಂತಿಯನ್ನು ನೀಡುತ್ತಿದೆ. ಹಿಂದುಸ್ಥಾನದಲ್ಲಿ ನಿಂತುಕೊಂಡು ನಾವು ಹಿಂದುಗಳಲ್ಲ ನಾವು ಲಿಂಗಾಯತರು ಎಂದು ಹೇಳುವ ಅವರು, ಬೇರೆಯವರ ಅಡ್ಡಪಲ್ಲಕ್ಕಿಯನ್ನು ವಿರೋಧಿಸುತ್ತಾರೆ. ಮಾನವೀಯತೆ ಬಗ್ಗೆ ಮಾತನಾಡುತ್ತಾರೆ ಆದರೆ ತಾವೇ ಸ್ವತಃ ಭಕ್ತರಿಂದ ಕಾಲು ಮುಗಿಸಿಕೊಳ್ಳುವ ಮೂಲಕ ನಾನು ನಿನಗಿಂತ ಶ್ರೇಷ್ಠ ಎಂದು ತೋರಿಸಿಕೋಳ್ಳುತ್ತಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ನೀಡಲಾಗಿದೆ. ಅವರವರ ಭಕ್ತಿಗೆ ಅವರವರು ಕಂಡುಕೊಂಡ ಶಕ್ತಿಯನ್ನು ದೇವರು ಎಂದು ಕರೆಯುವುದುಂಟು. ಆದರೆ ಇನ್ನೊಬ್ಬರಿಗೆ ತೊಂದರೆ ಕೊಡುವುದು ಯಾವ ನ್ಯಾಯ. ತಾವುಗಳು ನಡೆಸುವ ವಿವಿಧ ಸಮಾಜ ವಿರೋಧಿ ಚಟುವಟಿಕೆಗಳಿಗಳನ್ನು ಮುಚ್ಚಿಕೊಳ್ಳಲು ಮಾಧ್ಯಮದ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅವರುಗಳನ್ನು ಈಗಲಾದರೂ ಮಾಧ್ಯಮಗಳು ಬೀಡಬೇಕಿದೆ. ಕಾರಣ ಭಾರತ ಎನ್ನುವದು ಚೈನಾ ಮಾದರಿ ಕಮ್ಯೂನಿಸ್ಟ ಆಡಳಿತವಲ್ಲ ಇದು ಧಾರ್ಮಿಕತೆ ನೆಲೆಯಲ್ಲಿ ನಿಂತ ಪ್ರಜಾಪ್ರಬುತ್ವ.
No comments:
Post a Comment