Monday, January 25, 2016

ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ?. ಇಲ್ಲದಿದ್ದೆರೆ ಸುಮ್ಮನೆ ಕುಳಿತುಕೊಳ್ಳಿ

ರಾಷ್ಟ್ರ ಭವ್ಯ ಗಣರಾಜ್ಯೋತ್ಸವಕ್ಕೆ ಸಿದ್ಧವಾಗುತ್ತಿರುವಾಗ ಉಗ್ರರು ಅದನ್ನು ತಡೆಯಲು ಸಿದ್ಧವಾಗುತ್ತಿದ್ದರು.ಆದರೆ ನಮ್ಮ ಪೊಲೀಸ್ ವ್ಯವಸ್ಥೆಯ ಫಲದಿಂದಾಗಿ ವಿವಿಧ ರಾಜ್ಯಗಳಲ್ಲಿ ಅವತಿದ್ದ ಉಗ್ರರನ್ನು ಎಳೆದು ತಂದಿದ್ದಾರೆ. ಆದರೆ ವಿಚಿತ್ರ ನೋಡಿ ಮುಖ್ಯಮಂತ್ರಿಗಳ ಖಾಸಾ ಮನುಷ್ಯರು ಎಂದು ಹೇಳಿಕೊಳ್ಳುವ ಹಾಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ(?) ಪತ್ರಕರ್ತ ದಿನೇಶ ಅಮೀನ ಮಟ್ಟು ಬೇಜವಾಬ್ದಾರಿ ತನದ ಹೇಳಿಕೆ ನೀಡುವ ಮೂಲಕ ತಾವು ಏನು ಎಂದು ತಾವೇ ಬಣ್ಣಿಸಿಕೊಂಡಿದ್ದಾರೆ. ಮೂಲಭೂತವಾದ ಯಾವುದೇ ಇರಲಿ ಅದನ್ನುಸೆದೆ ಬಡಿಯಲೇಬೇಕು ಎನ್ನುವುದು ಎಲ್ಲರ ಚಿಂತನೆಯಾದರೆ ಇಲ್ಲಿ ಅನ್ಯಕೋಮಿನವರನ್ನು ಬಂಧಿಸಿದ್ದು ತಪ್ಪು ಎಂದು ದಿನೇಶ ಹೇಳುತ್ತಿದ್ದಾರೆ. ಹಾಗಾದರೆ ಉಗ್ರರನ್ನು ಸೆದೆ ಬಡೆಯುವುದು ತಪ್ಪೆ? ಈ ಹಿಂದಿನ ಘಟನೆಗಳನ್ನು ಒಮ್ಮೆ ನೆನಪಿಸಿಕೊಳ್ಳಿ ಅಷ್ಟೇ ಏಕೆ ಮೊನ್ನೆಯ ಪಠಾಣ್ ಕೋಟ್ ದಾಳಿಯನ್ನೇ ಉದಾಹರಿಸುವುದಾದರೆ ಎಸ್ಪಿ ನೀಡಿದ ಎಚ್ಚರಿಕೆಯನ್ನು( ಈ ಬಗ್ಗೆ ಇನ್ನೂ ಎನ್ಐಎ ಸ್ಪಷ್ಟನೆ ನೀಡಬೇಕಿದೆ) ಗಮನಿಸದ ಪೊಲೀಸರಿಂದಾಗಿ ಎಂತಹ ಆತಂಕ ಸೃಷ್ಟಿಯಾಗಿತ್ತು. ಈ ರೀತಿ ನಮ್ಮ ಪಡೆಗಳು ನಮ್ಮನ್ನು ರಕ್ಷಿಸಿದಾಗ ಅವರ ಬೆನ್ನಿಗೆ ನಿಂತು ಶಹಬಾಷ್ ಗಿರಿ ಹೇಳಬೇಕಾದ ನಾವುಗಳು ಈ ರೀತಿ ಕಾಮಾಲೆ ನಾಲಿಗೆಯಿಂದ ಮಾತನಾಡಿದರೆ ಹೇಗೆ ಸ್ವಾಮಿ? ಇನ್ನೂ ಸ್ವಲ್ಪ ದಿನ ಹೋಗಿದ್ದರೆ ಇತಿಹಾಸದ ಪುಟದಲ್ಲಿರುವ ಪ್ರಜಾವಾಣಿ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಕಾರ್ಯ ನಿರ್ವಹಿಸಬೇಕಿತ್ತು. ತನ್ನ ವಸ್ತು ನಿಷ್ಠತೆಗೆ ಹೆಸರಾಗಿದ್ದ ಪತ್ರಿಕೆಯ ಸೌಭಾಗ್ಯವೋ ಏನೋ ನೀವು ಪತ್ರಿಕೋದ್ಯಮ ಬಿಟ್ಟಿದ್ದು ಒಳ್ಳಯದೆ ಆಯಿತು. ಒಂದು ವೇಳೆ ನೀವು ಇದ್ದಿದ್ದರೆ ಪತ್ರಿಕೆಯ  ಮುಖಪುಟದಲ್ಲಿ ಉಗ್ರರನ್ನುಹೀರೋಗಳಂತೆ ಬಿಂಬಿಸುತ್ತಿದ್ದಿರಿ ಎಂದೆನಿಸುತ್ತದೆ. ನೀವು ವಿದ್ಯಾವಂತರು ಎಂದು ಹೇಳಿಕೊಂಡು ತಿರಾಗುಡುತ್ತಿರಿ ಸಾಮಾನ್ಯ ನಾಗರೀಕನಿಗೆ ಇರುವ ಸಾಮಾನ್ಯ ಬುದ್ಧಿಯೂ ಇಲ್ಲವೇ. ಉಗ್ರರು ಇಡುವ ಬಾಂಬುಗಳಾಗಲಿ, ಅಥವಾ ಚಲಾಯಿಸುವ ಗುಂಡುಗಳಾಲಿ ಯಾವುದು ಕೂಡ ಜಾತಿ ಧರ್ಮವನ್ನು ನೋಡುವುದಿಲ್ಲ. ಹಾಗಿರುವಾಗ ನಿಮಗೇಕೆ ಸ್ವಾಮಿ ಜಾತಿ ಪ್ರೀತಿ.? ನಾವೇನು ಭಾರತೀಯ ಮುಸ್ಲಿಮರಿಗೆ ವಿರೋಧ ವ್ಯಕ್ತಪಡಿಸಿದವರಲ್ಲ ಕಾರಣ ಅವರಲ್ಲಿಯೂ ಸಹ ಸಾಕಷ್ಟು ಜನ ಈ ದೇಶಕ್ಕಾಗಿ ಪ್ರಾಣವನ್ನೇ ನೀಡಿದ್ದಾರೆ. ಆದರೆ ಇತ್ತೀತ್ತಲಾಗಿ ಕೆಲವರು ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತವನ್ನು ಪ್ರೀತಿಸುವ ಮುಸ್ಲಿಂರು ಇಲ್ಲಿದ್ದಾರೆ ಅವರು ಸಹ ಉಗ್ರವಾದವನ್ನು ವಿರೋಧಿಸುತ್ತಿದ್ದಾರೆ. ಅಂತಹುದರಲ್ಲಿ ನಮ್ಮ ಸೇನಾ ಪಡೆಗಳು ಹಾಗೂ ಪೊಲೀಸರು ಮಾಡುವ ಕೆಲಸ ನಿಮಗೆ ರುಚಿಸಲಿಲ್ಲ ಅಲ್ಲವೇ. ನಿಮಗೆ ಒಂದು ಸವಾಲ್ ಹಾಕುತ್ತಿದ್ದೇನೆ. ಇಷ್ಟೇಲ್ಲಾ ಮಾತನಾಡುವ ನಿಮಗೆ ಒಂದು ವಾರ ಎಲ್ಲ ಐಶಾರಾಮಗಳನ್ನು ಬಿಟ್ಟು ಕಾಶ್ಮೀರದ -ಚಳಿಯಲ್ಲಿ ಗಡಿ ಕಾಯುವ ಶಕ್ತಿ ಇದೇಯೇ. ಪಾಕಿಸ್ತಾನದಿಂದ ಏಕಾಏಕಿ ತೂರಿ ಬರುವ ಶೆಲ್ ಹಾಗೂ ಎಕೆ 47 ನಿಂದ ಬರುವ ಗುಂಡುಗಳಿಗೆ ಎದೆಕೊಡುವ ಶಕ್ತಿ ಇದೆಯೇ?  ಇಲ್ಲ ಅಲ್ವಾ ಹಾಗಿದ್ದರೆ ನಮ್ಮ ಪಡೆಗಳ ಹಾಗೂ ಪೊಲೀಸರ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗಿಲ್ಲ. 

Thursday, January 14, 2016

ಗುಳೇದ ಲಕ್ಕಮ್ಮ

ಜಾತ್ರೆಯೆಂದಾಕ್ಷಣ ಊರಿನಲ್ಲಿ ಸದ್ದು ಗದ್ದಲ ಇರುತ್ತದೆ, ಆದರೆ ಈ ಊರಲ್ಲಿ ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆಯವರಿಗೆ ಯಾರೊಬ್ಬರು ಕಾಣುವುದಿಲ್ಲ! ಪ್ರತಿಯೊಂದು ಮನೆ, ಊರಿನ ಆಸ್ಪತ್ರೆ, ಶಾಲೆ, ಅಂಚೆ ಕಚೇರಿಗೆ ಬೀಗ ಹಾಕಿರುತ್ತಾರೆ. ನೀರವ ಮೌನ ಆವರಿಸುತ್ತದೆ. ಇದು ಈ ಗ್ರಾಮದ ಅನಾದಿಕಾಲದಿಂದ ನಡೆದುಕೊಂಡು ಬಂದ ಪದ್ಧತಿ. ಎಲ್ಲಲ್ಲಿ ಜನವಸತಿ ಇದೇಯೋ ಅಲ್ಲಲ್ಲಿ ದೇವರುಗಳು ಕೂಡ ಇವೆ. ಅವುಗಳಿ ಪ್ರತಿವರ್ಷ ಜಾತ್ರೆಗಳು ಕೂಡ ನಡೆಯುತ್ತವೆ. ಆ ಸಂದರ್ಭದಲ್ಲಿ ಊರಿನಲ್ಲಿ ಸಡಗರವೋ ಸಡಗರ. ಎಲ್ಲ ಮನೆಗಳ ಮುಂದೆ ರಂಗೋಲಿ ಹಾಕಿ ತಳಿರು ತೋರಣ ಕಟ್ಟಿ ಜಾತ್ರೆ ಮಾಡುವುದು ಸಂಪ್ರದಾಯ ಆದರೆ ಈ ಊರಿನಲ್ಲಿ ಮಾತ್ರ ಜಾತ್ರೆಯ ದಿನ ಊರೆ ಖಾಲಿಯಾಗುತ್ತದೆ. ಹೌದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮದಲ್ಲಿ ಇಂತಹ ವಿನೂತನ ಪದ್ಧತಿ ಇದೆ. ಪ್ರತಿಯೊಬ್ಬರು ಊರ ಹೊರಗೆ ನಡೆಯುವ ತಮ್ಮೂರ ಜಾತ್ರೆಗೆ ಮನೆ ಬೀಗ ಹಾಕಿಕೊಂಡು ಹೋಗುತ್ತಾರೆ, ಯಾವೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ. ಪ್ರತಿವರ್ಷ ಶೂನ್ಯ ಮಾಸದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ, ಜಾತ್ರೆ ಮಾಡುವಾಗ ಈ ಗ್ರಾಮದಲ್ಲಿ ಇಂತಹ ವಿಶೇಷ ಸಂಪ್ರದಾಯವನ್ನು ಆಚರಣೆ ಮಾಡುತ್ತಾರೆ. ಅಂದು ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 5.30ರವರೆಗೆ ಊರೊಳಗೆ ಪ್ರವೇಶ ಮಾಡುವಂತಿಲ್ಲ. ಇನ್ನೂ ಗ್ರಾಮ ದೇವತೆಯಾಗಿರುವ ಲಕ್ಕಮ್ಮ ಮೂಲತಃ ಶಾನಭೋಗರ ಮನೆಯ ಹೆಣ್ಣು ಮಗಳು ಎಂಬ ನಂಬಿಕೆಯಿದ್ದು, ಅವಳನ್ನು ಗೌಡರ ಮನೆಗೆ ಕೊಡಲಾಗಿತ್ತು ಎಂಬ ಪ್ರತೀತಿ ಇದೆ. ಅದಕ್ಕಾಗಿ ಇಂದಿಗೂ ಕೂಡ ಜಾತ್ರೆಯ ಸಂದರ್ಭದಲ್ಲಿ ಗೌಡರ ಮನೆಯಿಂದಲೇ ಆಕೆಗೆ ಮುತ್ತೈದೆ ಸಾಮಗ್ರಿಗಳನ್ನು ಕೂಡ ನೀಡಲಾಗುತ್ತದೆ
 ಈ ಊರಿನಿಂದ ಒಂದುವರೆ ಕಿ.ಮೀ ದೂರದಲ್ಲಿ ಗುಳೇದ ಲಕ್ಕಮ್ಮ ಜಾತ್ರೆ ಮಾಡುತ್ತಾರೆ. ಗ್ರಾಮದಲ್ಲಿ ಸುಮಾರು 2000 ಮನೆಗಳು 8,500 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಜಾತ್ರೆಯ ದಿನ ದೇವಿಯ ಅದ್ದೂರಿ ಮೆರವಣಿಗೆ ನಡೆಯುತ್ತದೆ. ಲಕ್ಕಮ್ಮ ಮೂಕಿ ದೇವತೆ ಆದದರಿಂದಲೋ ಏನೋ ದೇವಿಯ ಮುಂದೆ ಜೋರಾಗಿ ಉರಿಮೆಯನ್ನ ಬಡೆಯಲಾಗುತ್ತದೆ. ಗ್ರಾಮದ ತುಂಬ ಸುತ್ತವ ದೇವಿ ನಂತರ ಊರ ಹೊರಗಿನ ಪ್ರದೇಶಕ್ಕೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಯಾರೂ ಇರುವಂತಿಲ್ಲ .ಅಂದು ಹುಟ್ಟಿದ ಕೂಸು, ಬಾಣಂತಿ, ಹಾಸಿಗೆ ಹಿಡಿದ ಹಿರಿಯ ಜೀವಗಳು, ಮಕ್ಕಳು, ಅಂಗವಿಕಲರು ಸೇರಿ ಯಾರೊಬ್ಬರು ಗ್ರಾಮದಲ್ಲಿ ಇರುವಂತಿಲ್ಲ, ಎಲ್ಲರೂ ಜಾತ್ರೆಗೆ ಮನೆಯ ಬೀಗ ಹಾಕಿಕೊಂಡು ಹೋಗಬೇಕು. ಒಂದು ವೇಳೆ ಯಾರಾದರೂ ಮೃತಪಟ್ಟರೆ, ಶವ ಸಂಸ್ಕಾರ ಕೂಡ ಮಾಡುವಂತಿಲ್ಲ. ಇನ್ನೂ ಊರನ್ನು ಕಾಯಲು ನಾಲ್ಕೈದ ಜನ ತಳವಾರರನ್ನು ನೇಮಿಸಲಾಗಿರುತ್ತದೆ. ಅವರು ಊರ ಅಗಸಿಯಲ್ಲಿ ಬೇಲಿ ಹಾಕಿಕೊಂಡು ಈಡಿ ದಿನ ಯಾರೂ ಊರ ಒಳಗಡೆ ಹೋಗದಂತೆ ಕಾಯುತ್ತಿರುತ್ತಾರೆ
: ಇತ್ತ ಗುಳೆಹೋದ ತಂಡ ಮರದ ನೆರಳನ್ನು ಆಶ್ರಯಿಸುತ್ತಾರೆ. ಬಂಧುಗಳಿಗೆ ಸಂಭ್ರಮದ ಸ್ವಾಗತ. ಬಗೆ ಬಗೆಯ ತಿಂಡಿ ತಿನಿಸುಗಳನ್ನು ನೀಡಿ, ಉಪಚರಿಸುತ್ತಾರೆ. ಅದರಲ್ಲೂ ಉತ್ತರ ಕರ್ನಾಟಕ ಶೈಲಿಯ ಭೋಜನವಂತೂ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ. ಸಜ್ಜೆ ರೊಟ್ಟಿ, ಜೋಳದ ರೊಟ್ಟಿ , ಅಗಸೆ ಚಟ್ನಿ, ಗುರಳ್ಳ ಚಟ್ನಿ, ಕಡಲೇ ಚಟ್ನಿ ವಿವಿಧ ರೀತಿಯ ಪಲ್ಯಗಳು ಹಾಹಾ.. ಅದನ್ನೂ ಸವಿದವರು ಎಂದು ಕೂಡ ಲಕ್ಕಮ್ಮನ ಜಾತ್ರೆಯನ್ನು ಮರೆಯಲಾರರು ಎನ್ನುವಷ್ಟರ ಮಟ್ಟಿಗೆ ಖಾದ್ಯಗಳು ಆಹಾರ ಪ್ರಿಯರನ್ನು ಸೆಳೆಯುತ್ತವೆ.
 ಕೆಲವೊಂದು ಸಂಪ್ರದಾಯಗಳು ಧರ್ಮದ ಭಾವನೆಗಳನ್ನು ಮೀರಿಸುತ್ತವೆ ಎನ್ನುವುದಕ್ಕೆ ಚೋರನೂರು ಗ್ರಾಮವೇ ಉದಾಹರಣೆಯಾಗಿದೆ. ಗ್ರಾಮದಲ್ಲಿ ಸುಮಾರು 500ಕ್ಕೂ ಹೆಚ್ಚು ಮುಸ್ಲಿಂ ಸಮಾಜದ ಮನೆಗಳು, ಕೆಲವೊಂದು ಕ್ರಿಶ್ಚಿಯನ್ ಸಮುದಾಯದ ಮನೆಗಳು, ಇವರು ಕೂಡ ಗುಳೇದ ಲಕ್ಕಮ್ಮ ಜಾತ್ರೆ ಆಚರಿಸುತ್ತಾರೆ, ಇವರು ಕೂಡ ಬೀಗ ಹಾಕಿ ಜಾತ್ರೆಗೆ ಹೋಗಿ, ಜಾತ್ರೆಯನ್ನು ಆಚರಿಸುವ ಸಂಪ್ರದಾಯವು ಧರ್ಮಗಳ ಭಾವನೆಯನ್ನು ಮೀರಿಸಿದೆ. ಅನಾದಿಕಾಲದಿಂದ ಇಂತಹ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಜಾತ್ರೆಯ ದಿನ ಬೆಳಿಗ್ಗೆಯಿಂದ ಸಂಜೆ ಯವರಿಗೆ ಎಲ್ಲಾ ಮನೆಗಳಿಗೆ ಬೀಗ ಹಾಕುತ್ತಾರೆ, ಯಾರೊಬ್ಬರು ಇಂತಹ ಸಂಪ್ರದಾಯ ಮುರಿಯುವುದಿಲ್ಲ. ಎಲ್ಲಾ ಜನರು ಈ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿದ್ದಾರೆ. ಇನ್ನೂ ಗ್ರಾಮದ ಕೆರೆ ಅಂಗಳದಲ್ಲಿ ಸೇರುವ ಭಕ್ತರು ತಮ್ಮ ಜಾನುವಾರುಗಳನ್ನು ಬೆದರಿಸುವ ಮೂಲಕ ಜಾನುವಾರುಗಳ ರಕ್ಷಣೆಗೆ ದೇವಿಯಲ್ಲಿ ಪ್ರಾರ್ಥನೆ ಮಾಡುತ್ತಾರೆ.
 ಊರ ಹೊರಗಡೆ ಪ್ರತಿಷ್ಠಾಪನೆಗೊಳ್ಳುವ ದೇವಿಗೆ ಭಕ್ತರು ತಮ್ಮದೇಯಾದ ರೀತಿಯಲ್ಲಿ ಭಕ್ತಿ ಸಮರ್ಪಿಸುತ್ತಾರೆ. ಅದರಲ್ಲೂ ಯುವ ಜನರು ಸಂಪ್ರದಾಯದಂತೆ ಕೋಲಾಟವನ್ನು ಆಡುವ ಮೂಲಕ ಜಾತ್ರಗೆ ವಿಶೇಷ ಮೆರಗು ನೀಡಿ ಜನರನ್ನು ರಂಜಿಸುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ವಿಶೇಷ. ಇನ್ನೂ ಮತ್ತೆ ಸಂಜೆ ಗೋಧೂಳಿ ಸಮಯಕ್ಕೆ ಸರಿಯಾಗಿ ಚರಗವನ್ನು ಚೆಲ್ಲುತ್ತಾ ಮುಂದೆ ಮುಂದೆ ಸಾಗುತ್ತಾರೆ. ಲಕ್ಕಮ್ಮ ದೇವಿಯ ಹೊತ್ತು ಮೆರವಣಿಗೆಯ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಾರೆ.ಜಾತ್ರೆಯಲ್ಲಿ ಸಾಮೂಹಿಕವಾಗಿ ವನಬೋಜನ ಮಾಡುವುದರ ಮೂಲಕ  ಹಳೆಯ ಜಗಳ, ಮನಸ್ತಾಪಗಳನ್ನು ಮರೆತು ಒಂದಾಗುತ್ತಾರೆ. ಜಾತ್ರೆಯನ್ನು ಊರಾಚೆ ಹೋಗಿ ಮಾಡುವುದರಿಂದ ಸಾಂಕ್ರಾಮಿಕ ರೋಗ ಇತ್ಯಾದಿ ಅನಿಷ್ಠಗಳು ಬರುವುದಿಲ್ಲವೆಂದು ನಂಬುತ್ತಾರೆ.
ಒಟ್ಟಿನಲ್ಲಿ ವಸುದೈವ ಕುಟುಂಬಕಂ ಎನ್ನುವ ಮಾತನ್ನು ಆಚರಣೆಗೆ ತರುವ ಮೂಲಕ ಗುಳೆ ಲಕ್ಕಮ್ಮನ ಹೆಸರಿನಲ್ಲಿ ಒಂದಾಗಿರುವ ಚೋರುನೂರು ಗ್ರಾಮ ಬೇರೆ ಗ್ರಾಮಗಳಿಗೆ ಆದರ್ಶನವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ( ತುತಾ೵ಗಿ ಬರೆದಿರುವ ಕಾರಣ ಕಾಗುಣಿತ ಹಾಗೂ ವಾಕ್ಯ ರಚನೆ ಸರಿಯಾಗಿರದಿದ್ದರೆ ಸರಿಮಾಡಿಕೊಂಡು ಓದಿ)

Friday, October 3, 2014

ಮುಸ್ಲಿಂ ಪೂಜಾರಿ, ನೀವು ನೋಡಲೇಬೇಕಾದ ವಿಡಿಯೋ...!

ಜಾತಿ-ಧರ್ಮ ಅದು ಇದು ಅಂತ ಹೇಳಿ ನಾವೆಲ್ಲಾ ದಿನಕ್ಕೊಂದು ಜಗಳ ಹೊಡೆದಾಟಗಳಲ್ಲಿ ಭಾಗಿಯಾಗಿ ನೆಮ್ಮದಿಯ ಜೀವನವನ್ನು ಹಾಳು ಮಾಡಿಕೊಂಡಿದ್ದೇವೆ. ಆದರೆ ಇಲ್ಲೊಬ್ಬ ಮುಸ್ಲಿಂ ಯುವಕ ಹಿಂದು ದೇವತೆಯನ್ನು ಆರಾಧಿಸುವ  ಮೂಲಕ ನನಗೆ- ದರ್ಗಾ- ಹಾಗೂ ದುರ್ಗಾ ಎರಡು ಒಂದೇ ಎಂದು ಎನ್ನುವ ಮೂಲಕ  ಇತರರಿಗೆ ಮಾದರಿಯಾಗಿದ್ದಾರೆ. ಈಶ್ವರ -ಅಲ್ಲಾ  ತೇರೆನಾಮ ಎನ್ನುವಂತೆ ಹಿಂದು ದೇವರ ಆರ್ಶೀವಾದಕ್ಕೆ ಪಾತ್ರರಾಗಿರುವ ಅಬ್ದುಲ್ ರಜಾಕ್ ಈ ಮೂಲಕ ಜಿಹಾದ್ ಹೆಸರಲ್ಲಿ ರಕ್ತ ಪಿಪಾಸುಗಳಂತೆ ವರ್ತಿಸುವವರಿಗೆ ಹಾಗೂ ಜಾತಿ ಹೆಸರಲ್ಲಿ ವಿನಾಕಾರಣ ಸಮಾಜವನ್ನು ಹಾಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳಿಗೆ ಪಾಠವಾಗಿದ್ದಾರೆ.

ಬರಹ  ; ಪ್ರಶಾಂತ ರಾಜ ಗುರು 

Thursday, August 14, 2014

ನೀವು ಓದಲೇ  ಬೇಕಾದ ಬರಹ...

ಇದನ್ನು ನೀವು ಒಪ್ಪತ್ತಿರೋ ಬಿಡತೀರೋ ಗೊತ್ತಿಲ್ಲ ಆದ್ರೆ ನಾ ಒಂದು ವಿಷಯ  ಇಲ್ಲಿ ಹಂಚಿಕೊಳ್ಳಲೇಬೇಕು. ನಾವೆಲ್ಲರು ಇವತ್ತು ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿದ್ದೇವೆ. ಆದರೆ ಈ ಸಂಭ್ರಮ ನಿಜಕ್ಕೂ ಇದೇಯೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಾರಣ 1947 ರ ಮಧ್ಯರಾತ್ರಿ ಸಿಕ್ಕ ಸ್ವಾತಂತ್ರ್ಯ ಕೇವಲ ಬ್ರಿಟಿಷರು ತಮ್ಮ ಅಧಿಕಾರ ಬಿಟ್ಟು ಹೋದ ಸಮಯವೆಂದು ನನ್ನ ಭಾವನೆ. ಕಾರಣ ನೀವೆ ನೋಡಿ, ಇಂದಿಗೂ ಕೂಡ ನಮ್ಮ ಪ್ರಧಾನಿಗಳು ನಮ್ಮ ದೇಶದ ರಾಜಧಾನಿಯಲ್ಲಿ ನಮ್ಮ ಜನರ ನಡುವೆ ನಮ್ಮ ಜಾಗದಲ್ಲಿ ನಮ್ಮ ಭಾರತದ ತ್ರಿವರ್ಣೆ್  ಧ್ವಜ ಹಾರಿಸಬೇಕಾದರೆ ಸಾವಿರಾರು ಜನ ಪೊಲೀಸರು, ಸೈನಿಕರು ಇವರಿಗೆ ಭದ್ರತೆ ನೀಡಬೇಕು. 1947 ರಿಂದ 1950 ರವೆರೆಗೂ ಮಾತ್ರವೇ ನೆಹರು ಕಡಿಮೆ ಭದ್ರತೆಯಲ್ಲಿ ಧ್ವಜ ಹಾರಿಸಿದ್ದ ನೆನಪು. ಆದರೆ ಮುಂದಿನ ದಿನಗಳಲ್ಲಿ ಅವರು ಕೂಡ ಭದ್ರತೆ ಹೆಚ್ಚಿಸಿಕೊಂಡಿದ್ದರು. ನಮ್ಮ ನೆಲದಲ್ಲಿ ನಮ್ಮ ಪ್ರಧಾನಿಗೆ ವಿಶೇಷ ಭಧ್ರೆತೆ ಬೇಕಾದರೆ ಜನ ಸಾಮಾನ್ಯರ ಗತಿಯೇನು? ಪ್ರತಿ ದೀಪಾವಳಿ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ಸಹ ದೇಶದಾದ್ಯಂತ ಹೈ ಅಲರ್ಟ ಘೋಷಣೆ ಮಾಡ್ತಾರೆ, ಕಾರಣ ಮತ್ತದೆ ಉಗ್ರರ ಕಾಟ. 9/11 ದಾಳಿ ನಂತರ ಅಮೇರಿಕದ ಮೇಲೆ ಯಾವುದೇ ದೊಡ್ಡ ದಾಳಿಗಳು ನಡೆಯಲು ಸಾಧ್ಯವಾಗಲೇ ಇಲ್ಲ. ಕಾರಣ ಅಲ್ಲಿನ ವ್ಯವಸ್ಥೆ ಹಾಗೂ ಅಲ್ಲಿನ ಆಡಳಿತಗಾರರ ಮನಸ್ಥಿತಿ. ಆದರೆ ಮೂರು ಯುದ್ದಗಳು ಹಾಗೂ ದಿನನಿತ್ಯ ನಡೆಯುವ ಆಂತರಿಕ ದಾಳಿಗಳಿಂದಲೂ ಸಹ ನಾವು ಪಾಠ ಕಲಿಯದಿದ್ದರೆ ಹೇಗೆ ನೀವೆ ಹೇಳಿ. ? 26.11
ಮುಂಬೈ ದಾಳಿ ನಂತರ ಭದ್ರತೆ ಸುಧಾರಿಸಬಹುದೆಂಬ ಹಾಗೂ ನಂತರ ದಿನಗಳಲ್ಲಿ ಭಾರತ ಪಾಪಿ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬರಬಹುದೆಂಬ ನಂಬಿಕೆಯಿತ್ತು. ಆದರೆ ಆ ರೀತಿಯ ಯಾವುದೇ ಕ್ರಮಗಳು ನಡೆಯಲಿಲ್ಲ, ಇದರಿಂದಾಗಿ ಭಾರತದ ಧ್ವಜ ಹಾರಿಸಬೇಕಾದಗಲೂ ಸಹ ನಮ್ಮ ಪ್ರಧಾನಿಗಳಿಗೆ ವಿಶೇಷ ಭದ್ರತೆ ನೀಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. 

Sunday, July 27, 2014

ನೀವಾದರೂ ಬಾಯಿಬಿಡಿ…..!



ನೀವಾದರೂ ಬಾಯಿಬಿಡಿ…..!
ಬೆಳಗಾವಿ ಗಡಿ ಭಾಗದಲ್ಲಿ ಎಂಇಎಸ್ ಪುಂಡರು ಅಟ್ಟಹಾಸ ಮೆರೆಯುತ್ತಿದ್ದರೆ ಪೊಲೀಸರು ಕೈಲಾಗದ ಹೇಡಿಗಳಂತೆ ಹಾಗೂ ಜಿಲ್ಲಾಡಳಿತ ರೋಮ ಸಾಮ್ರಾಜ್ಯದ್ಯಂತೆ ಸುಮ್ಮನೆ ಕುಳಿತಿದೆ. ನೀವಾದರೂ ಬಾಯಿಬಿಡಿ..!
ಕನ್ನಡಿಗರ ದೇವಾಲಯದಂತಿದ್ದ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರು ಸುಮ್ಮನೆ ಕುಳಿತಿರುವುದು ನಿಜಕ್ಕೂ ನಾಚಿಗೇಗೇಡಿನ ಸಂಗತಿ.  ವಿನಾಕಾರಣ ವಿವಾದಗಳನ್ನು ಹುಟ್ಟುಹಾಕುವ ಅನಂತಮೂರ್ತಿ , ಕೋಮುಸೌಹಾರ್ದ ಹೆಸರಲ್ಲಿ ಜಾತಿ ವಿಷ ಬೀಜ ಬಿತ್ತುವ ಗಿರೀಶ ಕಾರ್ನಾಡ  ಹಾಗೂ ಉತ್ತಮರು ಎಂದು ಕರೆಸಿಕೊಳ್ಳುವ ಬೆಳಗಾವಿ ಜಿಲ್ಲೆಯವರಾದ ಚಂದ್ರಶೇಖರ ಕಂಬಾರ ಎಲ್ಲಿ ಅಡಗಿದ್ದಾರೆ ಎನ್ನುವುದು ತಿಳಿಯದಾಗಿದೆ.
ಕನ್ನಡ ನೆಲ-ಜಲ-ಭಾಷಾ ರಕ್ಷಣೆಗೆ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ ಅಕ್ಷರಷಃ ಅನಾಥ ಸ್ಥಿತಿಯಲ್ಲಿದೆ, ಸದಾ ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತಾ ಸಮ್ಮೇಳನ ಹೆಸರಲ್ಲಿ ಜಾತ್ರ ನಡೆಸುವ ಅಧ್ಯಕ್ಷ ಹಾಲಂಬಿಗೆ ಇನ್ನೂ ಬಾಯಲ್ಲಿನ ಕವಳ ಮುಗಿದ್ದಿಲ್ಲವೆಂದ ಕಾಣುತ್ತದೆ. ಇದು ಕೇವಲ ಆಕ್ರೋಶದ ಮಾತುಗಳಲ್ಲ. ಬದಲಾಗಿ ಇವರ ನಾಟಕ ನೋಡಿ ಬರೆದಿರುವ ವಿಮರ್ಷೆ.  ನಾಡಿನ ಜನರಿಂದ ಸನ್ಮಾನ ಸ್ವೀಕರಿಸುವ ಜ್ಞಾನಪೀಠ ಪುರಸ್ಕೃತರು ಹಾಗೂ ಸಾಹಿತಿಗಳು ಭಾಷಾ ಹಾಗೂ ಗಡಿ ವಿವಾದ ಬಂದಾಗ ಮನೆ ಸೇರುವುದನ್ನು ನೋಡಿದರೆ ಇವರಿಗಾಗಿಗೂ ಸಹ ಕನ್ನಡತನ ಉಳಿಯುವುದು ಬೇಕಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ನಾವು ಹಿಂದಿನ ಘಟನೆಗಳನ್ನು ಮರೆತಿದ್ದೇವೆ ಹಾಗೂ ಕಂಪ್ಯೂಟರ ಪರದೆಯ ಮೇಲೆ ನಾನಾ ಕೆಲಸಕ್ಕೆ ಬಾರದ ಕವನಗಳನ್ನು ಗೀಚುವ ಸೋಕಾಲ್ಡ ನವ ಯುಗದ ಸಾಹಿತಿಗಳಿಗೆ ಆ ಬಗ್ಗೆ ತಿಳುವಳಿಕೆ ನೀಡಿಲ್ಲ. ಏಕೀಕರಣ ಹಾಗೂ ಗೋಕಾಕ್ ಚಳುವಳಿಯನ್ನು ಒಮ್ಮೆ ನೆನೆಪಿಸಿಕೊಳ್ಳಬೇಕಿದೆ. ಏಕೀಕರಣದ ನಂತರ ಬಂದ ಗೋಕಾಕ್ ಚಳುವಳಿ ಆರಂಭದಲ್ಲಿ ಅಷ್ಟೊಂದು ಪ್ರಭಾವ ಶಾಲಿ ಅನಿಸಿರಲಿಲ್ಲ,.ಆದರೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಭೆ ಹೋರಾಟದ ಹಾದಿಯನ್ನು ಬಲಿಷ್ಠಗೊಳಿಸಿತು. ಚಳುವಳಿಗೆ ಮೇರು ನಟ ಡಾ. ರಾಜ್ ಎಂಟ್ರಿ ಹಾಗೂ ಅದಕ್ಕೆ ಅಂದಿನ ಸಾಹಿತಿಗಳ ಬೆಂಬಲ ಎಷ್ಟಿತ್ತೆಂದರೆ ಸ್ವತಃ ರಾಜ್ ಸಹ  ಅನೇಕ ಸಲ ಹೇಳಿಕೊಂಡಿದ್ದರು. ಅಂದು ನಡೆದ ಹೋರಾಟಗಳು ಕೇವಲ ಹಾರಾಟಕ್ಕೆ ಸೀಮಿತವಾಗಿರಲಿಲ್ಲ,.  ಬದಲಾಗಿ ನಾಡಿನ ರಕ್ಷಣೆಗೆ ಬದ್ಧ ಎಂಬುದನ್ನು ಎತ್ತಿ ತೋರಿಸಿದವು.
ಇನ್ನೂ ಇಂದಿನ ಹೋರಾಟಗಾರ ಎಂದು ಹೇಳಿಕೊಳ್ಳುವ ಕೆಲವರಿಗೆ ಇನ್ನೂ ಕೂಡ “ಹ “ ಓ”  ಕಾರಣಗಳನ್ನು ಹೇಳಿಕೊಡಬೇಕಾದ ಅನಿವಾರ್ಯತೆಯಿದ್ದು ಅವರಿಂದ ನಾಡಿನ ರಕ್ಷಣೆ ನೀರಿಕ್ಷಿಸುವುದು ಅಸಾಧ್ಯ. ಜತೆಗೆ ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ಸತೀಶಜಾರಕಿಹೋಳಿ ಮಾಧ್ಯಮಗಳ ಮುಂದೆ ಮಾತನಾಡಿ, ಅಲ್ಲಿನ ಸಮಸ್ಯೆಯನ್ನು ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಮಾಡುವುದರ ಜತೆಗೆ ನಾನು ಯಾರನ್ನು ಎದುರು ಹಾಕಿಕೊಳ್ಳಲು ಸಾಧ್ಯವಿಲ್ಲ ಹಾಗೂ ಇದು ರಾಜ್ಯದ ಸಮಸ್ಯೆಯಾಗಿದ್ದು ನನಗೂ ಅದಕೂ ಸಂಬಂಧವಿಲ್ಲ. ಹೋದರೆ ನಂದೇನು ಹೋಗುವುದಿಲ್ಲ ಕರ್ನಾಟಕದ  ಜಾಗ ಹೋಗುತ್ತದೆ ಎನ್ನುವ ಭಾವನೆ ಹೊಂದಿರುವುದು ನಿಜಕ್ಕೂ ಬೇಸರ ಮೂಡಿಸಿದೆ.
ಮೂರು ದಿನಗಳಿಂದ ಸದನದಲ್ಲಿ ಅರ್ಕಾವತಿ ಬಗ್ಗೆ ವಿನಾಕಾರಣ ಜಗಳ ಮಾಡುತ್ತಿರುವ ವಿಪಕ್ಷ ನಾಯಕರಿಗೆ ತಮ್ಮ ಪಕ್ಕದ ಜಿಲ್ಲೆಯ ಸಮಸ್ಯೆ ಬಗ್ಗೆ ಅರಿವಿಲ್ಲವಂತೆ, ಸಮಯ ಸಿಕ್ಕಾಗ ಮಾತನಾಡುತ್ತೇನೆ ಎನ್ನುವ ಮೂಲಕ ಅವರು ಕೂಡ ಮರಾಠಿಗರು ಹಾಗೂ ಶಿವಸೇನೆ ಯ ಓಟುಗಳ ಮೇಲೆ ಅವಲಂಬಿತನಾಗಿದ್ದು ಇದರಲ್ಲಿ ಕರ್ನಾಟಕದ ಹಿತ ಮಣ್ಣು ಪಾಲಾದರೂ ನಮಗೇನು ಚಿಂತೆಯಿಲ್ಲ ಎನ್ನುವ ರೀತಿಯಲ್ಲಿ ಮಾತಾಡಿರುವುದು ನಾಡಿನ ಜನತೆ ಗಮನಿಸಬೇಕಾದೆ.
ಬೆಳಗಾವಿ ಭಾಷಾ ಸಮಸ್ಯೆಯಿಂದ  ಹೊತ್ತಿಯುರಿತ್ತೊದ್ದರು, ಯಾವೋಬ್ಬ ಜನ ಪ್ರತನಿಧಿಗಳಾಗಲಿ ಸರ್ಕಾರದ ಪ್ರಮುಖ ಸ್ಥಳಗಳಲ್ಲಿ ಕುಳಿತಿರುವ ಜಿಲ್ಲೆಯ ಶಾಸಕರುಗಳಾಗಲಿ ಬಾಯಿಬಿಡದೆ ಇರುವುದು ನಿಜಕ್ಕೂ ನಾಚಿಗೆ ಗೇಡಿನ ಸಂಗತಿ.

Friday, December 27, 2013

ಈಡೆರದ ಆಸೆ : ಅಮರನಾದ ಪ್ರೇಮ

ನಿಜಕ್ಕೂ  ಈ ಪ್ರೇಮ ಕಥೆಯ ಕೊನೆಯ ಕಂತನ್ನೂ ಬರೆಯಲು ತುಂಬಾನೇ ಕಷ್ಟವಾಗುತ್ತಿದೆ.

ಸುಮಾರು ವರ್ಷಗಳ ಕಾಲ ಬಚ್ಚಿಟ್ಟಿದ್ದ ಪ್ರೇಮವನ್ನು ಹೇಳಿಕೊಂಡಿದ್ದ ನಾಯಕ ಪ್ರೇಮ ಹಾಗೂ ಅದನ್ನು ಕೇಳಿ ದುಃಖಿತಳಾಗದ್ದ ನಾಯಕಿ ರಮ್ಯಾ ಈಗ ಮತ್ತೆ ದೂರವಾಗುತ್ತಿದ್ದಾರೆ. ಕಾರಣ ಅವಳು ಗೃಹಿಣಿ. ಸಮಾಜದಲ್ಲಿ ಈ ರೀತಿಯ ಸಂಬಂಧಕ್ಕೆ ಯಾವುದೇ ಬೆಲೆ ಇರದು ಎಂದು ಅರಿತಿದ್ದ ಪ್ರೇಮ ಇಷ್ಟು ವರ್ಷಗಳಾದರೂ ಅದನ್ನು ಹೇಳಿರಲಿಲ್ಲ. ಆದರೆ ಅವಳು  ಒತ್ತಾಯಮಾಡಿದಳೆಂಬ ಕಾರಣಕ್ಕೆ ಪ್ರೀತಿಸುತ್ತಿರುವ  ವಿಷಯ ಹೇಳಿದ ಪ್ರೇಮನಿಗೆ ಒಳಗೊಳಗೆ ಅಪರಾಧಿ ಮನೋಭಾವನೆ ಕಾಡಹತ್ತಿತು. ಈ ನಡುವೆ ಅವಳಿಗೆ ಸಂದೇಶ ಕಳುಹಿಸಿದ ಪ್ರೇಮನಿಗೆ ಬಂದ  ಉತ್ತರ ಅವನನ್ನು  ಇನ್ನಷ್ಟು ಗಾಸಿ ಘೋಳಿಸಿದ್ದವು. ಸ್ನೇಹಿತರಿದ್ದಾಗಿನಿಂದ ಹಿಡಿದು ಇಲ್ಲಿಯವರೆಗೂ ಎಲ್ಲಿಯೂ ಸಹ ಎಂದು ಆತ ಅವಳ ಮೇಲೆ ಸಿಟ್ಟು ಮಾಡಿಕೊಂಡವನಲ್ಲ.  ಎಲ್ಲೇ ಮೀರಿದವನೂ ಅಲ್ಲ. ಅವಳನ್ನು ದೇವತೆಯಂತೆ ಪೂಜಿಸುತ್ತಿದ್ದ. ಅವಳನ್ನು ಅಪ್ಪಿ ತಪ್ಪಿಯೂ ಕೆಟ್ಟ ಭಾವನೆಯಿಂದ ಮುಟ್ಟಿದವನು ಅಲ್ಲ. ಅವಳು ಸಹ  ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದಳು. ಅವನನ್ನು ಪ್ರೀತಿಸುತ್ತಿದ್ದರೂ ಸಹ ಅವಳು ಅವನ ಮುಂದೆ ಎಂದಿಗೂ ಆ ರೀತಿಯ ನಡುವಳಿಕೆ ತೋರಿರಲಿಲ್ಲ. ಕಾರಣ ಮತ್ತದೇ ಸ್ನೇಹ. ಇಷ್ಟು ಗಾಡವಾಗಿದ್ದ ಸ್ನೇಹ ಪ್ರೇಮಕ್ಕೆ ತಿರುಗಿದ್ದರೂ ಅದನ್ನು ವ್ಯಕ್ತಪಡಿಸಿದ  ಇಬ್ಬರೂ ಈಗ ಕಣ್ಣಿರಿನಲ್ಲಿ ಕೈ  ತೊಳಯುವಂತಾಗಿತ್ತು. ಆದರೆ ಇದನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ತಿ ಇತ್ತು. ಆದರೆ  ನಾಯಕ ಪ್ರೇಮ ಮಾತ್ರ ಮನೆಯಲ್ಲಿ ಮದುವೆ ಮಾತು ಎತ್ತಿದರೆ ಸಾಕು ಉರಿದು ಬೀಳುತ್ತಿದ್ದ. ಅವನನ್ನು ಇಷ್ಟಪಟ್ಟಿದ್ದ ಹಲವಾರು ಹುಡುಗಿಯರು ಅವನೆದರು ಮಂಡಿಯೂರಿ ಕುಳಿತರು ಅವನು ಜಪ್ಪಯ್ಯ  ಎನ್ನಲಿಲ್ಲ. ಅದರಲ್ಲೂ ಒಂದು ಹುಡುಗಿಯಂತೂ ಆತ್ಮಹತ್ಯೆಗೆ ಯತ್ನಿಸಿದ್ದರೇ ಇನ್ನೋಬ್ಬಳು ತನ್ನ ಸರ್ವಸ್ವವನ್ನು ಈತನಿಗೆ ಧಾರೆ ಎರೆಯಲು ಕಾತುರಳಾಗಿದ್ದಳು ಆದರೂಸಹ ಪ್ರೇಮ ಮಾತ್ರ ಅದ್ಯಾವುದಕ್ಕೂ ಬೆಲೆ ನೀಡದೆ ತನ್ನ ಗುಪ್ತ ಪ್ರೇಯಸಿ ರಮ್ಯಳನ್ನು ಪ್ರೀತಿಸುತ್ತಿದ್ದ.
ಈ ನಡುವೆ ಗೃಹಿಣಿಯಾಗಿದ್ದ ರಮ್ಯಾ ಆಗೊಂದು ಈಗೊಂದು ಸಂದೇಶಗಳನ್ನು ಬಿಟ್ಟರೆ ಎಂದೂ ಸಹ ಅವನ ಜತೆ ಮಾತನಾಡುವುದಾಗಲಿ ಭೇಟಿ ಮಾಡುವುದಾಗಲಿ ಮಾಡಲೇಯಿಲ್ಲ. ಅವಳ ಸ್ಥಿತಿಯನ್ನು ಅರಿತಿದ್ದ ಪ್ರೇಮ ಸಹ ತನ್ನ ಪ್ರೇಮವನ್ನು ಬಿಟ್ಟುಕೊಟ್ಟಿದ್ದ.  ಆದರೆ ಅವನ ಮನಸ್ಸಿನಲ್ಲಿ ಅವಳು ಮಾತ್ರ ಅಚ್ಚಳಿಯದೆ ಉಳಿದು ಬಿಟ್ಟಿದ್ದಳು.  ಜತೆಗೆ ತನ್ನ ವ್ಯವಹಾರದಲ್ಲಿ ಲಾಸ್ ಮಾಡಿಕೊಂಡ ಪ್ರೇಮ ಮತ್ತಷ್ಟು ಕೃಷನಾದ. ಇದರಿಂದಾಗಿ ಅವನ ಆರೋಗ್ಯ ಸಹ ಹದಗೆಟ್ಟಿತು. ಆಗ ಅವನ ಮನೆಯವರಿಗೆ ಚಿಂತೆ ಕಾಡಲಾರಂಭಿಸಿತು. ಅವನಿಗೆ ಇದದ್ದು ಒಂದು ಆಸೆ ಅದು ರಮ್ಯಾಳನ್ನು ಲಾಂಗ್ ಡ್ರೈವಗೆ ಕರೆದುಕೊಂಡು ಹೋಗುವುದು, ಅಲ್ಲಿ ಅವನ ಕೈಯಿಂದ ಅವಳಿಗೆ ಊಟ ಮಾಡಿಸುವುದು ಅಷ್ಟೇ. ಆದರೆ ಕೊನೆಗೂ ಅದಕ್ಕೆ ಅವಕಾಶ ಸಿಗಲೇ ಯಿಲ್ಲ. ಇದರಿಂದಾಗಿ ಅವನ ತನ್ನ ಜೀವನವನ್ನೇ ಕೊನೆಗೊಳಿಸಲು ಉದ್ದೇಶಿಸಿದ. ಒಂದು ದಿನ ಮುಂಜಾನೆಯ ಸಮಯದಲ್ಲಿ ಹೊರಟ ಪ್ರೇಮ ಮತ್ತೆ ತಿರುಗಿ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದ. ಅಂದು ಮುಂಜಾನೆ ಎದ್ದ ಪ್ರೇಮ ತನ್ನ ನೆಚ್ಚಿನ ಸೂಟ್ ಧರಿಸಿ ಟಿಪ್ ಟಾಪ್ ಆಗಿ ಹೋರಟ, ಕಾಲು ನಡಿಗೆಯಲ್ಲಿ ಸುಮಾರು ದೂರ ನಡೆದ ಮೇಲೆ ಅಲ್ಲಿ ಅವನಿಗೆ ದೂರದ ಬೆಟ್ಟವೊಂದು ಕಾಣಿಸಿತು. ಬೆಟ್ಗದ ತುದಿಗೇರಿದ ಆತ   ಇನ್ನೇನು ಸಾಯಬೇಕು ಎನ್ನುವ ಸಂದರ್ಭದಲ್ಲಿ  ದಿವ್ಯವಾಣಿಯೊಂದು ಕೇಳಿದ ಅನುಭವವಾಯಿತು. ಹಿಂದಿರುಗಿ ನೋಡಿದ ಪ್ರೇಮನಿಗೆ ಸನ್ಯಾಸಿಗಳೊಬ್ಬರು ಆತನನ್ನು ನೋಡುತ್ತಿರುವುದು ಕಾಣಿಸಿತು. ಆಗ ಅವರ ಮಾರ್ಗದರ್ಶನ ಪಡೆದ ಪ್ರೇಮ ಮುಂದೆ ಅವರನ್ನು ಹಿಂಬಾಲಿಸಿದ. ಅವರು ಅವನಲ್ಲಿನ ಆಧ್ಯಾತ್ಮದ ಹಸಿವನ್ನು ಗಮನಿಸಿ ಆತನಿಗೆ ದೀಕ್ಷೆ ನೀಡಿದರು. ಆಗ  ಪ್ರೇಮನಾಗಿದ್ದವ ಬದಲಾಗಿ ಸ್ವಾಮೀ ಪ್ರೇಮಾನಂದ ಗೂರುಜಿಯಾಗಿ ಬದಲಾದ. ಹಿಂದಿನ ಎಲ್ಲ ಘಟನೆಗಳನ್ನು ,ಮರೆತು ಸಮಾಜಕ್ಕೆ ದಾರಿ ದೀಪವಾದ. ಆದರೆ ಅವನನ್ನು ಈ ಹಂತಕ್ಕೆ ತಂದ ರಮ್ಯಾ ಮಾತ್ರ  ಅಲ್ಲೇ ಉಳಿದಳು. ಆದರೆ ಅವನ ಈ ಸ್ಥಿತಿಗೆ ಕಾರಣವಾಗಿದ್ದೂ ಏನು ಎನ್ನುವುದು ಮಾತ್ರ ಯಾರಿಗೂ ತಿಳಿಯಲಿಲ್ಲ. ಕಾರಣ ಅವನು ಎಲ್ಲಿಯೂ ಸಹ ಅಪ್ಪಿ-ತಪ್ಪಿ ಬಾಯಿಬಿಡಲಿಲ್ಲ.  ಈ ಪ್ರೇಮದಲ್ಲಿ ಅವನ ಆಸೆಗಳು ಈಡೆರಲಿಲ್ಲ ಆದರೆ ಪ್ರೇಮನ ನಿಷ್ಕಲ್ಮಶ ಪ್ರೇಮ -ಪ್ರೀತಿ-ಪ್ಯಾರ- ಇಷ್ಕ -ಮೋಹಬ್ಬತ್ ಮಾತ್ರ ಅಮರವಾಯಿತು.

"ಪ್ರೇಮ " ಪತ್ರ : ಹೇಳಲಾಗದ ಪ್ರೀತಿಯ ಪತ್ರ

ಸ್ನೇಹಿತರೇ ಪ್ರೇಮ ಮತ್ತು  ರಮ್ಯಳ ಪ್ರೇಮದ ವಿಷಯ ನಿಮಗೆ ಗೊತ್ತಿರುವಂತೆ ಒಂದು ಹಂತಕ್ಕೆ ಬಂದು ನಿಂತಿದೆ. ಮದುವೆಯಾಗಿರುವ ರಮ್ಯಳನ್ನು ಪ್ರೀತಿಸುವುದು ತಪ್ಪು ಎಂದು ಗೊತ್ತಿದ್ದರೂ ಸಹ ಪ್ರೇಮ ಮಾತ್ರ ತನ್ನ ಪ್ರೇಮಕ್ಕೆ ಯಾವುದೇ ಕಪ್ಪು ಚುಕ್ಕಯಾಗದಂತೆ ನೋಡಿಕೊಂಡಿದ್ದಾನೆ. ಅವಳು ಸಹ ತಮ್ಮ ಸ್ನೇಹಕ್ಕೆ ಬೆಲೆ ನೀಡಿ ಪ್ರೇಮವನ್ನು ಹಿಡಿದಿಟ್ಟಿಕೊಂಡಿದ್ದಳು. ಆದರೆ ಈಗ ಅವಳೇ ಅವನ ಬಾಯಿ ಬಿಡಿಸುವ ಮೂಲಕ ಅವನು ಕಣ್ಣಿರಿಡುವಂತೆ ಮಾಡಿದ್ದಾಳೆ. ಇತ್ತ ಪ್ರೇಮ ತಾನು ಪ್ರೀತಿಸಿದ ಹುಡುಗಿ ನೀನೆ ಎಂದು ಹೇಳುವ ಮೂಲಕ ಅವಳಿಗೆ ತನ್ನ ಪ್ರೀತಿಯನ್ನು ವಿವರಿಸಿದ್ದಾನೆ. ಆದರೆ ಅವನಲ್ಲಿ ಈಗ ಒಂದು ರೀತಿಯ ಗೀಲ್ಟ ಕಾಡಲು ಆರಂಭಿಸಿದೆ.  

ಇದು ಒತ್ತಟ್ಟಿಗಿರಲಿ ಸ್ನೇಹಿತರೇ, ಈಗ  ಒಂದು ವಿಷಯ ಹೇಳಲೇಬೇಕು ಅದೇನಪ್ಪ ಅಂದ್ರೆ, ಪ್ರೇಮ ನೂ ಕೂಡಾ ತನ್ನ ಹುಡುಗಿಗೆ ಅವಳ ಮದುವೆಗೆ ಮುಂಚೆ ಒಂದು ಪ್ರೇಮ ಪತ್ರ ಬರೆದಿದ್ದ.  

" ಹಾಯ್ ಚಿನ್ನ, ಹೇಗಿದಿಯಾ, ಎಷ್ಟು ದಿನ ಆಯ್ತು ನಿನ್ನ ನೋಡಿ, ಆ ನಿನ್ನ ನಗು,  ಆ ನಿನ್ನ ಇಳಿಬಿಟ್ಟ ಕೂದಲೂ ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ಶಾಂತತೆ, ಏನೇ ಆದರೂ ಯಾರಿಗೂ ಹೇಳದೇ ಏನನ್ನೂ ತೋರಿಸಿ ಕೋಡದೆ ಇರುವ  ನಿನ್ನ  ಈ ಮಾರ್ಗದರ್ಶಕ ವ್ಯಕ್ತಿತ್ವಕ್ಕೆ  ಕಣೇ ನಾನು ಸೋತು ಹೋಗಿದ್ದು,
ನಿನ್ನಲ್ಲಿ ಸ್ವಾರ್ಥದ ಸೋಂಕಿಲ್ಲ,ಅಂತಸ್ತಿನ ಲೆಕ್ಕಾಚಾರವಿಲ್ಲ, ಬಾಲ್ಯ,ಯವ್ವನ,ಮುಪ್ಪಿನ ಭೇಧವಿಲ್ಲ. ಓ ಗೆಳತಿ ನಿನ್ನ ಸ್ನೇಹ ಶ್ರೀಗಂಧದ ಪರಿಮಳದಂತೆ. ಆ ಸವಿನೆನಪು ನನ್ನ ಬದುಕನ್ನು ಹಸಿರಾಗಿಸಿದೆ. ಅಂದು ನಿನ್ನ ನೋಡಿದ ನಾನು ಇಂದಿನವರೆಗೂ ಆ ಮುಖವನ್ನು ಮರೆಯಲು ಸಾಧ್ಯವಾಗಿಲ್ಲ. ನಿನ್ನ ಪ್ರತಿಯೊಂದು ಮಾತು ಕ(ವಿ)ತೆ ಇಂದಿಗೂ ನನ್ನ ಕಿವಿಯಲ್ಲಿ ಹಾಗೇ ಇದೆ. ಎರಡು ವರ್ಷಗಳ ನಂತರ ಆದರೂ ನೀನು ನನ್ನ ಮರೆತಿಲ್ಲ. ಅದು ನನಗೆ ಎಷ್ಟು ಖುಷಿ ನೀಡಿದೆ ಗೊತ್ತಾ ಚಿನ್ನ. 
""ನೀನು ಬಂದ ಮೇಲೆ ಮೇಲೆ ತಾನೇ ಇಷ್ಟೂ ಚಂದ  ಈ ಬಾಳು
ನೀನೇ ತಾನೆ ಹೇಳೆ ಕೋಟ್ಟೆ ಪ್ರೀತಿಸಲು'' 
ನಿಜವಾಗ್ಲು ನಿನು ಮರಳಿ ಪೋನ ಮಾಡಿದ ದಿನಾ ನಾನು ರಾತ್ರಿಯಲ್ಲ ನಿದ್ದೆನೇ ಮಾಡ್ಲಿಲ್ಲ. ಯಾಕೇ ಗೊತ್ತಾ ನಿನ್ನ ಸ್ನೇಹನೇ ಅಂತದ್ದೂ, ಆದರೆ ಮುಂದೆ ನೀನು ಯಾರನ್ನೋ ಪ್ರೀತಿಸ್ತೀನಿ ಅಂತ ಹೇಳಿದಾಗ ಆದ ಗಾಯ  ಇನ್ನೂ ಆರಿಲ್ಲ.  ಈಗಲೂ ಕಾಲ ಮಿಂಚಿಲ್ಲ ಚಿನ್ನು ನಾನು ನಿನ್ನ ತುಂಬ ಪ್ರೀತಿಸ್ತೀನಿ. ಎಷ್ಟೋ ಬಾರಿ ನಿನ್ನ ಹತ್ರ ಹೇಳಬೇಕು ಅಂದ್ಕೋಂಡೆ ಆದ್ರೆ ಹೇಳಕೋ ಆಗ್ಲಿಲ್ಲ.  ಬೇರೆಯಾರನ್ನೋ ಮದುವೆ ಮಾಡ್ಕೊಂಡು ಬಾಳೋದಕ್ಕಿನ ನಿನ್ನ ಮದುವೆಯಾದ್ರೆ ಉತ್ತಮ ಅಂತ ನನ್ನ ಅಭಿಪ್ರಾಯ. ನಿನ್ನ ಅಭಿಪ್ರಾಯನಾ ಬೇಗ ತಿಳಿಸು

""ಮಿಂಚಾಗಿ ನೀನು ಬರಲು ನಿಂತಲಿಯೇ ಮಳೆಗಾಲ
ಬೆಚ್ಚಗೆ ನೀ ಜತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆ ಕಾಲ
ಇನ್ನಲ್ಲೇ ನನಗೆ ಉಳಿಗಾಲ..  

ವಿರಹದ ಬೇಗೆಯಲ್ಲಿ ಬೇಯುತ್ತಿರುವ ನನ್ನಗೆ ಒಪ್ಪಿಗೆ ಸೂಚಿಸುವ ಮೂಲಕ ಪ್ರೀತಿಯ ಮಹಲ್ ಕಟ್ಟುತ್ತಿಯೋ ಅಥವಾ ನಿರಾಕರಿಸಿ ನಮ್ಮ ಪ್ರೀತಿಗೆ ಗೋರಿ ಕಟ್ಟುತ್ತಿಯೋ ನಿನಗೆ ಬಿಟ್ಟಿದ್ದು..

( ಓದುಗರೆ ಈ ಪ್ರೀತಿ ಹೇಗ ಮುಂದುವರಿತು ರಮ್ಯಳಾ ಮದುವೆ ಮುಂಚೆ ಅವರ ಸ್ನೇಹ ಹೇಗಿತ್ತು ಎನ್ನುವ ಇನ್ನೂ ಕೆಲವು ಕೂತುಹಲಕಾರಿ ಘಟನೆಯೊಂದಿಗೆ ಮತ್ತೆ ಬೇಟಿಯಾಗೋಣ)